ಕೊಲೆ ಆರೋಪದಿಂದ ದೋಷ ಮುಕ್ತ- ಜಿಲ್ಲಾ ನ್ಯಾಯಾಲಯದ ತೀರ್ಪು

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಹಳಿಯಾಳ

ಸ್ಥಳೀಯ ತೆರಗಾಂವ ಗ್ರಾಮದ ಶಬ್ಬೀರ್ ಮುಕ್ತಾö್ಯಂ ಸಾಬ ಬಡೇಸಾಬನವರ ಮತ್ತು ಮೈರುನ್ನಾ ಶಬ್ಬೀರ್ ಬಡೆಸಾಬನವರ ಮೇಲೆ ತಮ್ಮ ಸೊಸೆ ನಸೀಮಾಳನ್ನು ಕೊಲೆ ಮಾಡಿದ ಅಪರಾಧದ ಮೇಲೆ ಆರೋಪಿಸಲ್ಪಟ್ಟ ಪ್ರಕರಣದಲ್ಲಿ ಆರೋಪಿತರನ್ನು ನಿರ್ಧೋಷಿ ಎಂದು ಶಿರಸಿಯ ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು ಇರುತ್ತದೆ.  ಶಿರಸಿ ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ ವಿ ಅವರು ದಿ. ೨೨ ರಂದು ತೀರ್ಪು ಪ್ರಕಟಿಸಿರುವರು.

CHETAN KENDULI

  ಆರೋಪಿತರ ಮೇಲೆ ಪ್ಲಾಸ್ಟಿಕ್ ಕ್ಯಾನ್‌ನಲ್ಲಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದು ಬೆಂಕಿ ಹಚ್ಚಿ ತಮ್ಮ ಸೊಸೆ ನಸೀಮಾಳಿಗೆ ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಳಿಯಾಳ ಪೋಲೀಸ್ ವೃತ್ತ ನೀರಿಕ್ಷಕರು ಆರೋಪದ ಪಟ್ಟಿ ಸಲ್ಲಿಸಿದ್ದರು. ಕಳೆದ ನಾಲ್ಕುವರೆ ವರ್ಷ ವಿಚಾರಣೆಯ ನಂತರ ನ್ಯಾಯಾಲಯದ ತೀರ್ಪು ಪ್ರಕಟಗೊಂಡಿದ್ದು ಇರುತ್ತದೆ.  ಆರೋಪಿತರ ಪರವಾಗಿ ಹಿರಿಯ ವಕೀಲ ರವೀಂದ್ರ ನಾಯ್ಕ ಮತ್ತು ಉದಯ ನಾಯ್ಕ ವಾದ ಮಂಡಿಸಿದ್ದು ಇರುತ್ತದೆ.

Be the first to comment

Leave a Reply

Your email address will not be published.


*