ಬೆಳ್ತಂಗಡಿ ಮಾಲಾಡಿ ಗ್ರಾಮಪಂಚಯತ್ ಪಿ.ಡಿ.ಓ ಲಂಚ ಪಡೆಯುವ ವೇಳೆ ಎ.ಸಿ.ಬಿ ಬಲೆಗೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಬೆಳ್ತಂಗಡಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತಕ್ಕೆ ಎಸಿಬಿ ತಂಡವೊಂದು ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ಪಂಚಾಯತ್ ಅಭಿವೃದ್ದಿ ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ವಶಕ್ಕೆ ಪಡೆದ ಘಟನೆ ಇಂದು(ಡಿ.13) ನಡೆದಿದೆ.

CHETAN KENDULI

ಮಾಲಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ವ್ಯಕ್ತಿಯೋರ್ವರಿಂದ ಪಂಚಾಯತ್ ಆಸ್ತಿ ದಾಖಲೆ ಇ ಸ್ವತ್ತು 9 ಮತ್ತು 11 ಎ ನಮೂನೆಯನ್ನು ನೀಡಲು ಲಂಚವನ್ನು ಸ್ವೀಕರಿಸುತ್ತಿರುವ ವೇಳೆ ಧಿಡೀರ್ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹದಳ ತಂಡ ಪಿಡಿಒ ರವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂಬುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Be the first to comment

Leave a Reply

Your email address will not be published.


*