ದಕ್ಷಿಣ ಏಷ್ಯಾದಲ್ಲೆ ಮೊದಲ ಬಾರಿಗೆ ಪಾಶ್ರ್ವವಾಯುಗೆ ಮಾರ್ಗಭಂಜಕ ತಂತ್ರಜ್ಞಾನ ಬಳಸುತ್ತಿರುವ:: ಮಣಿಪಾಲ್ ಆಸ್ಪತ್ರೆ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


        ಆರೋಗ್ಯ


ಪದೇ ಪದೇ ಮರುಕಳಿಸುವ ಪಾಶ್ರ್ವವಾಯು ಆಘಾತವನ್ನು ತಡೆಗಟ್ಟಲು ಕಾರ್ಡಿಯಾಕ್ ಅಕ್ಲೂಡರ್ ಅನ್ನು ಯಶಸ್ವಿಯಾಗಿ ಅಳವಡಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ

90 ವರ್ಷದ ರೋಗಿಗೆ ಲಾಭ ತಂದ ಈ ಅನನ್ಯ ವೈದ್ಯಕೀಯ ತಂತ್ರ

 

ಬೆಂಗಳೂರು, (ಸೆ: 26): ಪದೇಪದೇ ಮರುಕಳಿಸುವ ಪಾಶ್ರ್ವವಾಯು ಆಘಾತ(ಸ್ಟ್ರೋಕ್)ವನ್ನು ತಡೆಯುವುದಕ್ಕಾಗಿ ಮತ್ತೊಂದು ವೈದ್ಯಕೀಯ ಅದ್ಭುತ ಕಾರ್ಯವನ್ನು ಬೆಂಗಳೂರು ಮಣಿಪಾಲ್ ಆಸ್ಪತ್ರೆ ಕೈಗೊಂಡಿದ್ದು, ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಮೊದಲ ಬಾರಿಗೆ ಮಾರ್ಗಭಂಜಕ ತಂತ್ರಜ್ಞಾನವನ್ನು ಬಳಸಿದೆ. 90 ವರ್ಷ ವಯಸ್ಸಿನ ರೋಗಿಯ ಹೃದಯದ ಭಾಗವೊಂದನ್ನು ಮುಚ್ಚಲು ಮತ್ತು ರಕ್ತ ಗಡ್ಡೆ ಕಟ್ಟುವುದನ್ನು ತಡೆಯಲು ಈ ನೂತನ ವೈದ್ಯಕೀಯ ತಂತ್ರವನ್ನು ಮಣಿಪಾಲ್ ಆಸ್ಪತ್ರೆಯ ಹೃದಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಂಜನ್ ಶೆಟ್ಟಿ ಅವರು ಬಳಸಿದ್ದಾರೆ. ಪಾಶ್ರ್ವವಾಯು ಆಘಾತ ಭಾರತದಲ್ಲಿ ಸಾವು ಮತ್ತು ವೈಕಲ್ಯತೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈ ಆಘಾತಕ್ಕೆ ಪ್ರಾಥಮಿಕ ಕಾರಣ ಎಂದರೆ- ಏಟ್ರಿಯಲ್ ಫೈಬ್ರಿಲೇಷನ್ ಆಗಿರುತ್ತದೆ. ಈ ಸ್ಥಿತಿಯಲ್ಲಿ ಹೃದಯದ ಮೇಲ್ಭಾಗದ ಗೂಡು(ಏಟ್ರಿಯಮ್)ಗಳು ಸರಿಯಾಗಿ ಸಂಕುಚಿತವಾಗುವುದಿಲ್ಲ. ಇದರಿಂದ ರಕ್ತ ಗಡ್ಡೆ ಕಟ್ಟುತ್ತದೆ. ಈ ಗಡ್ಡೆಗಳು ದೇಹದ ಯಾವುದೇ ಭಾಗಕ್ಕೆ ತೆರಳಬಹುದಾಗಿರುತ್ತದೆ. ಇದು ಮೆದುಳಿನ ರಕ್ತ ಪೂರೈಕೆಗೆ ಅಡ್ಡಿವುಂಟು ಮಾಡಿದಾಗ ಪಾಶ್ರ್ವವಾಯುವಿಗೆ ದಾರಿಯಾಗುತ್ತದೆ.

 

ಈ ಅನನ್ಯ ಪ್ರಕರಣ ಅಧ್ಯಯನದ ವಿವರಗಳನು ಹಂಚಿಕೊಂಡ ಮಣಿಪಾಲ್ ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಂಜನ್ ಶೆಟ್ಟಿ ಅವರು ಮಾತನಾಡಿ, “ಕೇಂದ್ರ ಕರ್ನಾಟಕ ಭಾಗದಿಂದ ಬಂದ ಮತ್ತು ಪದೇ ಪದೇ ಪಾಶ್ರ್ವವಾಯು ಆಘಾತಕ್ಕೆ ಗುರಿಯಾಗುವ ಇತಿಹಾಸ ಮತ್ತು ಏಟ್ರಿಯಲ್ ಫೈಬ್ರಿಲೇಷನ್‍ನ ಹಿನ್ನಲೆ ಇದ್ದ 90 ವರ್ಷ ವಯಸ್ಸಿನ ಸದ್ಗøಹಸ್ಥರೊಬ್ಬರು ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ಬಂದಿದ್ದರು. ಅವರ ಸ್ಥಿತಿಯನ್ನು ಪರಿಗಣಿಸಿ ಪಾಶ್ರ್ವವಾಯು ಆಘಾತದ ಅಪಾಯವನ್ನು ಕಡಿಮೆ ಮಾಡಲು ರಕ್ತ ತಿಳಿಗೊಳಿಸುವ ಔಷಧಗಳನ್ನು ನೀಡಲಾಗಿತ್ತು. ಇದರಿಂದಾಗಿ ದುರದೃಷ್ಟವಶಾತ್ ಅವರಿಗೆ ಸಂಕೀರ್ಣ ತೊಂದರೆಗಳು ಉಂಟಾಗಿದ್ದವು. ರೋಗಿಗೆ ತ್ವಚೆಯಲ್ಲಿ ಮತ್ತು ಮೂತ್ರದಲ್ಲಿ ರಕ್ತಸ್ರಾವ ಉಂಟಾಗುತ್ತಿತ್ತು. ಅವರ ಸ್ಥಿತಿ ಗಂಭೀರವಾಗಿದ್ದು, ಸಣ್ಣಪುಟ್ಟ ಗಾಯಗಳು ಹೆಚ್ಚಿನ ರಕ್ತಸ್ರಾವಕ್ಕೆ ದಾರಿ ಮಾಡಿಕೊಡುವುದಲ್ಲದೆ, ಇದು ಅವರ ಮೆದುಳಿನಲ್ಲಿ ಉಂಟಾದರೆ ದುರಂತ ವಾಗಬಹುದಿತ್ತು. ಆದ್ದರಿಂದ ರಕ್ತ ತಿಳಿಗೊಳಿಸುವ ಔಷಧಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿತ್ತು’’ ಎಂದರು.

“ ಒಂದು ಕಡೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ರಕ್ತ ತಿಳಿಗೊಳಿಸುವ ಔಷಧಗಳು ಅಗತ್ಯವಿರುತ್ತವೆ. ಮತ್ತೊಂದು ಕಡೆ ಇದರಿಂದ ಹೆಚ್ಚಿನ ರಕ್ತಸ್ರಾವದ ಪ್ರಕರಣಗಳು ಉಂಟಾಗಬಹುದು. ಒಂದಕ್ಕೂ ಹೆಚ್ಚುಬಾರಿ ಪಾಶ್ರ್ವವಾಯು ಆಘಾತÀಕ್ಕೆ ಗುರಿಯಾದ ರೋಗಿಗಳಲ್ಲಿ ರಕ್ತ ತಿಳಿಗೊಳಿಸುವ ಔಷಧಗಳನ್ನು ನೀಡುವುದೋ ಅಥವಾ ಅದರಿಂದ ಉಂಟಾಗುವ ಸಂಕೀರ್ಣ ತೊಂದರೆಗಳನ್ನು ತಡೆಯುವುದೊ ಎಂಬುದರ ವಿಷಯದಲ್ಲಿ ಸಂದಿಗ್ಧತೆ ಕಾಡುತ್ತದೆ. ಎಡ ಏಟ್ರಿಯಲ್(ಹೃತ್ಕರ್ಣ)ನ ಅಪೆಂಡೇಜ್ ಅದರ ಭಾಗವೇ ಆಗಿದ್ದು, ರಕ್ತ ಗಡ್ಡೆ ಕಟ್ಟಲು ಕಾರಣವಾಗುತ್ತದೆ. ರಕ್ತ ಗಡ್ಡೆ ಕಟ್ಟುವುದನ್ನು ತಡೆಯುವ ಸಾಮಥ್ರ್ಯದ ಕ್ರಮ ಎಂದರೆ ಈ ಭಾಗವನ್ನು ಮುಚ್ಚಿಹಾಕುವುದಾಗಿದೆ. ಇದರಿಂದ ರಕ್ತದ ಗಡ್ಡೆಗಳು ಹೊರಬರದಂತೆ ತಡೆಯಬಹುದು. ನವೀನ ಮತ್ತು ಪರಿಣಾಮಕಾರಿ ಉಪಕರಣವೊಂದನ್ನು ಬಳಸುವುದರೊಂದಿಗೆ ಇದನ್ನು ಯಶಸ್ವಿಯಾಗಿ ಸಾಧಿಸಲಾಯಿತು. ಎಡ ಹೃತ್ಕರ್ಣದ ಅಪೆಂಡೇಜ್ ಅನ್ನು ಕಾರ್ಡಿಯಾಕ್ ಅಕ್ಲೂಡರ್ ಬಳಸಿ ಮುಚ್ಚಲಾಯಿತು. ಹೀಗೆ ಅಪೆಂಡೇಜ್ ಅನ್ನು ಮುಚ್ಚಿದ ನಂತರ ರಕ್ತ ತಿಳಿಗೊಳಿಸುವ ಔಷಧಗಳನ್ನು ನಿಲ್ಲಿಸುವುದರೊಂದಿಗೆ ಭವಿಷ್ಯದ ಪಾಶ್ರ್ವವಾಯುವಿನ ಅಪಾಯ ಕಡಿಮೆಯಾಗಿತ್ತು. ಈ ಉಪಕರಣದ ಅಳವಡಿಕೆ ಅದ್ಭುತವಾದ ಯಶಸ್ಸು ಕಂಡಿದ್ದು, ರೋಗಿಯು ದೀರ್ಘಕಾಲದವರೆಗೆ ಬದುಕುವ ಸಾಧ್ಯತೆಯನ್ನು ಹೆಚ್ಚಿಸಲು ನೆರವಾಗಲಿದೆ’’ ಎಂದರು.

ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥರು ಮತ್ತು ವೃದ್ಧರ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅನೂಪ್ ಅಮರ್‍ನಾಥ್ ಅವರು ಮಾತನಾಡಿ, “ಏಟ್ರಿಯಲ್ ಫೈಬ್ರಿಲೇಷನ್(ಎಎಫ್) ತೊಂದರೆ ಇರುವ ರೋಗಿಗಳಲ್ಲಿ ಸಾವು ಮತ್ತು ರೋಗಸ್ಥಿತಿಗೆ ಪಾಶ್ರ್ವವಾಯು ಪ್ರಮುಖ ಕಾರಣವಾಗಿರುತ್ತದೆ. ಪಾಶ್ರ್ವವಾಯು ಹೊಂದಿರುವ ರೋಗಿಗಳಲ್ಲಿ ಆರನೇ ಒಂದರಷ್ಟು ಜನರಿಗೆ ಏಟ್ರಿಯಲ್ ಫೈಬ್ರಿಲೇಷನ್ ಇರುವುದು ಕಂಡುಬಂದಿರುತ್ತದೆ. 80 ವರ್ಷ ಮೇಲ್ಪಟ್ಟ ರೋಗಿಗಳಲ್ಲಿ ಇದು ಮೂರನೇ ಒಂದರಷ್ಟು ಉನ್ನತಮಟ್ಟದಲ್ಲಿರುತ್ತದೆ.

ಸಾಮಾನ್ಯವಾಗಿ ಏಟ್ರಿಯಲ್ ಫೈಬ್ರಿಲೇಷನ್ ಹೊಂದಿರುವ ರೋಗಿಗಳಿಗೆ ರಕ್ತ ಗಡ್ಡೆ ಕಟ್ಟುವುದನ್ನು ತಡೆಯಲು ರಕ್ತ ತಿಳಿಗೊಳಿಸುವ ಔಷಧಗಳ ಅಗತ್ಯವಿರುತ್ತದೆ. ಈ ಪ್ರಕರಣದಲ್ಲಿ ರೋಗಿಗೆ ರಕ್ತ ಸೋರಿಕೆ ಉಂಟಾಗುತ್ತಿದ್ದು, ಇದರ ಬಗ್ಗೆ ತಕ್ಷಣ ಗಮನಹರಿಸುವ ಅಗತ್ಯವಿತ್ತು. ಆದರೆ, ರೋಗಿಯ ವಯಸ್ಸು ಆತಂಕದ ವಿಷಯವಾಗಿತ್ತು. ಆದರೆ, ಈ ಉಪಕರಣ ಅಳವಡಿಕೆಗೆ ಅವರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದು ಅವರ ಜೀವನದ ಗುಣಮಟ್ಟವನ್ನು ಸುಧಾರಿಸಿದ್ದು, ಯಾವುದೇ ಸಂಕೀರ್ಣ ತೊಂದರೆಗಳಿಲ್ಲದೆ, ಆರೋಗ್ಯಕರ ಜೀವನವನ್ನು ಅವರು ನಡೆಸುತ್ತಿದ್ದಾರೆ. ಆನಿಗದಿತ ಹೃದಯ ಮಿಡಿತಗಳಿಂದ ಊಂಟಾಗುವ ಪಾಶ್ರ್ವವಾಯು ಆಘಾತಗಳನ್ನು ತಡೆಯಲು ವೃದ್ಧರಲ್ಲಿ ಈ ಉಪಕರಣಗಳನ್ನು ಬಳಸಬಹುದಾಗಿದೆ’’ ಎಂದರು.

Be the first to comment

Leave a Reply

Your email address will not be published.


*