ಜೂ.30ಕ್ಕೆ ಪರ್ತಗಾಳಿ ಪೀಠಾಧಿಪತಿಯಾಗಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕುಮಟಾ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೆಯ ಪೀಠಾಧಿಪತಿಯಾಗಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಗುರು ಪೀಠಾರೋಹಣ ಕಾರ್ಯಕ್ರಮವು ಜೂ.30 ರಂದು ಅಪರಾಹ್ನ 3.10ಕ್ಕೆ ಕಾಣಕೋಣದ ಪರ್ತಗಾಳಿಯ ಜೀವೋತ್ತಮ ಮಠದಲ್ಲಿ ಸರಳವಾಗಿ ನೆರವೇರಲಿದೆ ಎಂದು ಶ್ರೀಮಠ ತಿಳಿಸಿದೆ.ಅಂದು ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪೂರ್ವಾಹ್ನ ಶ್ರೀ ರಾಮದೇವ ವೀರ ವಿಠ್ಠಲ ದೇವರ ಮಹಾಪೂಜೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನಮಾಡಿ ಸ್ವಾಮೀಜಿಯವರು ಸಿಂಹಾಸನದಲ್ಲಿಆಸೀನರಾಗುವರು. ಶ್ರೀಮಠದ ಶಾಖಾ ಮಠಗಳ ಸಮಿತಿಯಿಂದ ಪೀಠಾರೂಢ ಗುರುಗಳಿಗೆ ಪಟ್ಟಕಾಣಿಕೆ ಸಲ್ಲಿಸಿ, ಫಲ ಮಾಲಾದಿಗಳನ್ನು ಅರ್ಪಿಸಲಾಗುವುದು.

CHETAN KENDULI

ಚಾರ್ತುಮಾಸಾಂಗವಾಗಿ, ಜೂ.31 ರಂದು ಸಾಯಂಕಾಲ 5 ಗಂಟೆಗೆ ಅವರು ಚಾರ್ತುಮಾಸ್ಯ ವೃತ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಂತೆ ಸಮಾರಂಭವನ್ನು ವೈಭವೀಕರಿಸದೇ ಸಂಯೋಜನೆಗೊಳಿಸಲಾಗಿದೆ ಎಂದು ಶ್ರೀ ಮಠ ತಿಳಿಸಿದೆ.

Be the first to comment

Leave a Reply

Your email address will not be published.


*