ನಾಳೆ ನಡೆಯಲಿರುಬ ಕುರುಬ ಸಮಾಜದ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು 40 ಟ್ಯಾಕ್ಸಿ ರೆಡಿ…!!! ಕುರುಬ ಸಮಾಜ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮದರಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ನ.27:

ನ.೨೯ ಶನಿವಾರದಂದು ಬಾಗಲಕೋಟನಲ್ಲಿ ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಲು ನಡೆಯುವ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಮುದ್ದೇಬಿಹಾಳ ತಾಲೂಕಿನಿಂದ ೪೦ ಟ್ಯಾಕ್ಸಿ ಸೇರಿದಂತೆ ವ್ಯಯಕ್ತಿಕ ವಾಹನಗಳ ಮೂಲಕ ಅಂದಾಜು ೨ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ ಎಂದು ತಾಲೂಕಾ ಕುರಬ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಕುರುಬರು ಎಸ್.ಟಿ. ಮೀಸಲಾಯಿತಿಯಲ್ಲಿದ್ದಾರೆ. ಅಲ್ಲದೆ ಕುರುಬ ಸಮಾಜವನ್ನು ಎಸ್.ಟಿ.ಗೆ ಒಳಪಡಿಸಿದರೆ ಮೂಲತ ಕಾಡು ಕುರುಬರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆರ್ಥಿಕ, ಶೈಕ್ಷಣಿ ಸೇರಿದಂತೆ ಎಲ್ಲ ರಂಗಳಲ್ಲಿಯೂ ಹಿಂದುಳಿದಿರುವ ಕುರುಬ ಸಮಾಜದ ಏಳಿಗೆಯಾದಬೇಕೆಂದರೆ ಎಸ್.ಟಿ.ಗೆ ಸೇರಿಸುವುದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು.

 

Be the first to comment

Leave a Reply

Your email address will not be published.


*