ಕೊರೊನಾ ಗೆದ್ದ ವಾರಿಯರ್ಸ್ಗೆ ಹೂಮಳೆಯ ಸ್ವಾಗತ.

ವರದಿ: ಪ್ರಕಾಶ ಮಂದಾರ.

ಹರಿಹರ:-ಕರೋನಾ ವೈರಸ್ ನ ವಿರುದ್ಧ ಹಗಲು ಇರುಳು ಎನ್ನದೇ ದಿನದ ಇಪ್ಪತ್ತನಾಲ್ಕು ಗಂಟೆಗಳು ನಗರದ ಜನರ ರಕ್ಷಣೆಯಲ್ಲಿ ತಡೆದಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಕೊರೊಸಾ ವೈರಸ್ ಪಾಸಿಟಿವ್ ಕಂಡು ಬಂದ ಹಿನ್ನೆಲೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಳೆದ ಹದಿನೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಯಶಸ್ವಿಯಾಗಿ ಚಿಕಿತ್ಸೆ ಪಡೆದು ಇಂದು ಆಸ್ಪತ್ರೆಯಿಂದ ಮರಳಿ ಬಂದ ಕರೋನಾ ವಾರಿಯರ್ಸ್ ಗಳನ್ನುನಗರದ ವೃತ್ತ ನಿರೀಕ್ಷಕರು, ಹಾಗೂ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹೂಮಳೆಯ ಸ್ವಾಗತದಿಂದ ಆತ್ಮೀಯವಾಗಿ ಬರಮಾಡಿಕೊಂಡರು .

ಈ ಸಂದರ್ಭದಲ್ಲಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ವೃತ್ತ ನಿರೀಕ್ಷಕರಾದ ಶಿವಪ್ರಸಾದ್ ,ನಗರ ಠಾಣೆಯ ಪಿಎಸ್ಐ ಶೈಲಾ ಶ್ರೀ ,ಹಾಗೂ ನಗರ ಗ್ರಾಮಾಂತರ ಠಾಣೆಯ ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*