ದಿವಂಗತ ಶ್ರೀ ವಿಠ್ಠಲ್ ಹೇರೂರ ಮರೆಯದ ಮಾಣಿಕ್ಯರ 66ನೇ ಹುಟ್ಟು ಹಬ್ಬವನ್ನು ದಿನಾಂಕ :10.04.2019 ರಂದು ರಾಜ್ಯದ ವಿವಿಧ ಸ್ಥಳಗಳಲ್ಲಿ ಆಚರಿಸಲಾಯಿತು.

 

ದಿವಂಗತ ಶ್ರೀ ವಿಠ್ಠಲ್ ಹೇರೂರಜಿ ಅವರ ಅಭಿಮಾನಿ ಬಳಗ ಈ 66ನೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಯಶಸ್ವಿಗೊಳಿಸಿದರು.

ಈ ಸಮಾಜಕ್ಕಾಗಿಯೆ ತಮ್ಮ ಪ್ರಾಣವನ್ನು ಮುಡುಪಾಗಿರಿಸಿ, ಶಿಕ್ಷಣ, ಸಂಘಟನೆ, ಹೊರಾಟದೊಂದಿಗೆ ನುಡಿದಂತೆ ನಡೆದಂತ ಮಹಾನ ವಿಚಾರವಾದಿ ಸನ್ಮಾನ್ಯ ಶ್ರೀ ವಿಠ್ಠಲ ಹೇರೂರಜಿಯವರು ಎಂದರೆ ತಪ್ಪಾಗಲಿಕಿಲ್ಲ.

ಬ್ರಹತ ಬೆಂಗಳೂರು ನಗರದಲ್ಲಿ ರಾಜ್ಯದ ಲಕ್ಷಾಂತರ ಜನರನ್ನು ಸೇರಿಸಿದ್ದ ಸಮಯದಲ್ಲಿ, ಮೆಜೆಸ್ಟಿಕ್ ನಿಂದ ಕಾಲ್ನಡಿಗೆಯಲ್ಲಿ ನನ್ನ ಅಜ್ಜ ಡಾ. ಶಿವಾನಂದ ಬಿದರಿ ಅವರೊಂದಿಗೆ ಬ್ರಹತ ಪ್ರತಿಭಟನಾ ಸಮಾರಂಭದಲ್ಲಿ ಪಾಲ್ಗೊಂಡ ನೆನಪುಗಳು ಇನ್ನು ಮಾಸಿಲ್ಲ.

ಸ್ವಾತಂತ್ರ್ಯ ಬಂದ ನಂತರ ರಾಜ್ಯದಲ್ಲಿ ಕೋಲಿ ಗಂಗಾಮತ ಸಮಾಜವನ್ನು ಜಾಗೃತಿ ಮೂಡಿಸಿ, ಸಮಾಜ ಕಟ್ಟಿದ ಶ್ರೇಯಸ್ಸು ಶ್ರೀ ವಿಠ್ಠಲ ಹೇರೂರು ಅವರಿಗೆ ಸಲ್ಲುತ್ತದೆ.

ಶ್ರೀ ವಿಠ್ಠಲ ಹೇರೂರ ಅವರು MLC ಆಗಿದ್ದ ಅಲ್ಪಾವಧಿಯಲ್ಲಿಯೇ ಶ್ರೀ ಚೌಡಯ್ಯನವರ ಚರಿತ್ರೆಯನ್ನು ಮತ್ತು ಸಮಾಜದ ಇತಿಹಾಸವನ್ನು ಬಿಚ್ಚಿಟ್ಟು ಸರಕಾರಕ್ಕೆ ಗೊತ್ತುಪಡಿಸಿದರು.

ಮೊಟ್ಟ ಮೊದಲ ಬಾರಿಗೆ ಶ್ರೀ ಚೌಡಯ್ಯ ಗುರು ಪೀಠ ಸ್ಥಾಪಿಸಿ, ಸಮಾಜವನ್ನು ಸಂಘಟಿಸಿದ ಕೀರ್ತಿ ಶ್ರೀ ವಿಠ್ಠಲ್ ಹೇರೂರ ಅವರಿಗೆ ಸಲ್ಲುತ್ತದೆ.

ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ದೇವಲ್ ಗಾಣಗಾಪೂರ ದಲ್ಲಿರುವ ಕೋಲಿ ಸಮಾಜದ ಶಕ್ತಿ ಕೇಂದ್ರದಲ್ಲಿ ದಿವಂಗತ ಸನ್ಮಾನ್ಯ ಶ್ರೀ ವಿಠ್ಠಲ ಹೇರೂರು ಜೀ ರವರ 66 ನೇ ಹುಟ್ಟುಹಬ್ಬದ ಅಂಗವಾಗಿ  ಕುಟುಂಬಸ್ಥರಾದ ಭಗವಂತಪ್ಪ ಹೇರೂರ ಲಕ್ಷ್ಮಣ್ ಹೇರೂರ ಬಸವರಾಜರ ಹೇರೂರ ಗುರುನಾಥ್ ಹೇರೂರ ಗ್ರಾಮಸ್ಥರು ಅಭಿಮಾನಿಗಳು ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿದೆ.

_ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ!!!_

ವಂದನೆಗಳೊಂದಿಗೆ,
ದಿನಾಂಕ : 11.04.2019.

ಇಂತಿ ತಮ್ಮ ವಿಶ್ವಾಸಿ,

ಸಂಜೀವ ಕೋಲಕಾರ, ಬೆಂಗಳೂರು .
ಮೊಬೈಲ್ ನಂ. 9844986224
??????

Be the first to comment

Leave a Reply

Your email address will not be published.


*