ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಚಾರ ಮಾಡಿದ್ರೆ ಕೈಕಾಲು ಕತ್ತರಿಸ್ತೇವೆ: ಚಿಂಚನ್ಸೂರ್ ಗೆ ಜೀವ ಬೆದರಿಕೆ !!

  1. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಚಾರ ಮಾಡಿದ್ರೆ ಕೈಕಾಲು ಕತ್ತರಿಸ್ತೇವೆ: ಚಿಂಚನ್ಸೂರ್ ಗೆ ಜೀವ ಬೆದರಿಕೆ !!

ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಚುನಾವಣೆಗೆ ನಿಲ್ಲಲು ಸಿದ್ಧತೆ ನಡೆಸಿರುವ ಉಮೇಶ್ ಜಾಧವ್‌ಗೆ ಬೆಂಬಲ ನೀಡಲು ಮಾಜಿ ಸಚಿವ ಬಾಬುರಾವ್ ಚಿಂಚನ್ಸೂರ್ ತಯಾರಾಗಿದ್ದಾರೆ. ಆದ್ರೆ ಈ ಕಾರಣಕ್ಕೆ ಚಿಂಚನ್ಸೂರ್, ತಮಗೆ ಜೀವ ಬೆದರಿಕೆ ಬಂದಿದೆ ಎಂದು ಆರೋಪಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಚಾರ ಮಾಡಿದ್ರೆ ಕೈ ಕಾಲು ಕತ್ತರಿಸುತ್ತೇವೆ. ಲೋಕಸಭಾ ಚುನಾವಣೆ ಪ್ರಚಾರಕ್ಕೆ ನೀನು ಬರಬಾರದು. ಜಾಧವ್ ಜಾಧವ್ ಅಂತಾ ಪ್ರಚಾರಕ್ಕೆ ಹೋದ್ರೆ, ಪರಿಣಾಮ ನೆಟ್ಟಗಿರಲ್ಲ ಎಂದು ಖರ್ಗೆ ಬೆಂಬಲಿಗರು ತನಗೆ ಜೀವ ಬೆದರಿಕೆ ಹಾಕಿದ್ದಾರೆಂದು ಚಿಂಚನ್ಸೂರ್ ಆರೋಪಿಸಿದ್ದಾರೆ.

ಅಲ್ಲದೇ ನನ್ನ ಜೀವ ತೆಗೆದ್ರೂ ನಾನು ಪ್ರಚಾರದಿಂದ ಹಿಂದೆ ಸರಿಯಲ್ಲ. ಖರ್ಗೆ ಬೆಂಬಲಿಗರ ಬಗ್ಗೆ ಇವತ್ತೇ ಕಂಪ್ಲೇಂಟ್ ಕೊಡ್ತೀನಿ ಎಂದು ಬಾಬುರಾವ್ ಚಿಂಚನ್ಸೂರ್ ಹೇಳಿದ್ದಾರೆ

Source @T.V5 KANNADA

Be the first to comment

Leave a Reply

Your email address will not be published.


*