ಭಗ್ನಪ್ರೇಮಿಗಳಿಬ್ಬರ ಅನೈತಿಕ ಸಂಬಂಧ-ವಿಷಪ್ರಾಶನದಲ್ಲಿ ಅಂತ್ಯ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಭಗ್ನಪ್ರೇಮಿಗಳಿಬ್ಬರ ಅನೈತಿಕ ಸಂಬಂಧ ಅಂತಿಮದಲ್ಲಿ ಆತ್ಮಹತ್ಯೆಯ ದಾರಿ ತೋರಿಸಿದ ಘಟನೆ ಬಂಡ್ರಿ ಗೊಲ್ಲರಹಟ್ಟಿಯಲ್ಲಿ ಜರುಗಿದೆ.ಘಟನಾವಳಿಯ ನಾಯಕ ಮದ್ದಪ್ಪ ವಿವಾಹಿತ,ನಾಯಕಿ (ಎಸ್)ವಿವಾಹಿತೆ ಕೂಡ್ಲಿಗಿ ಪೊಲೀಸ್ ಠಾಣಾವ್ಯಾಪ್ತಿಯ ಹಾಗೂ ಸಂಡೂರು ತಾಲೂಕಿನ ಬಂಡ್ರಿ ಗೊಲ್ಲರಹಟ್ಟಿಯವರು. ಒಂದೇ ಗ್ರಾಮದವರಾದ ಇವರಿಬ್ಬರೂ ವಿವಾಹಕ್ಕೂ ಮುನ್ನ ಬಹು ವಷ೯ಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರೆಂದು, ಕಾರಣಾಂತರಗಳಿಂದ ಇಬ್ಬರಿಗೂ ಬೇರೆ ಬೇರೆ ಕಡೆ ಮದುವೆಯಾಗಿತ್ತು ತಿಳಿದುಬಂದಿದೆ,ಆದರೂ ಕೂಡ ಇವರಿಬ್ಬರೂ ಪರಸ್ಪರ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದು,ಇಬ್ಬರ ನಡುವೆ ಅನೈತಿಕ ಸಂಬಂಧ ಕದ್ದು ಮುಚ್ಚಿ ಹಾಗೆಯೇ ಮುಂದುವರೆದು,ಕೊನೆಗೆ ಇವರಿಬ್ಬರೂ ಬೇರೆಡೆ ತೆರಳಲು ನಿಧ೯ರಿಸಿದ್ದಾರೆ.ಅಂತೆಯೇ ಇವರಿಬ್ಬರೂ ಮೇ 22ರಂದು ರಾತ್ರೋ ರಾತ್ರಿ ಗ್ರಾಮ ತೊರೆದಿದ್ದಾರೆ.ದಿನದಲ್ಲಿಯೇ ತಮ್ಮ ಗ್ರಾಮಕ್ಕೆ ಇಬ್ಬರೂ ಮರಳುವ ನಿಧಾ೯ರಕ್ಕೆ ಬಂದಿದ್ದಾರೆ,ಅನೈತಿಕ ಸಂಬಂಧ ಹೊಂದಿದ್ದ ಭಗ್ನ ಪ್ರೇಮಿಗಳು ಮಯಾ೯ದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳಲು ನಿಧ೯ರಿಸಿದ್ದಾರೆ,ಅಂತೆಯೇ ಇವರಿಬ್ಬರೂ ಬಂಡ್ರಿ ಗ್ರಾಮದ ಹೊರವಲಯದಲ್ಲಿ ಮೇ23ರ ರಾತ್ರಿಯೇ ಕ್ರಿಮಿನಾಶಕ ಸೇವಿಸಿದ್ದಾರೆ.ಮದ್ದಪ್ಪ ಪ್ರಾರಂಭದಲ್ಲಿಯೇ ಅತಿಹೆಚ್ಚು ಕ್ರಿಮಿನಾಶಕ ಸೇವಿಸಿದ್ದಾನೆಂದು ತಿಳಿದುಬಂದಿದೆ,ಉಳಿದದನ್ನು ಆತನ ಪ್ರಿಯತಮೆ (ಎಸ್)ಕ್ರಿಮಿನಾಶಕ ಸೇವಿಸಿದ್ದಾಳೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ಮೇ24ರಂದು ಬೆಳಗಾಗುವುದರಲ್ಲಿ ಮದ್ದಪ್ಪ(34)ಅಸುನೀಗಿದ್ದಾನೆ, ತೀರಾ ಅಸ್ವಸ್ಥಳಾಗಿದ್ದ(ಎಸ್-22)ಳನ್ನು ಬಂಡ್ರಿಗ್ರಾಮಸ್ಥರು ಗಮನಿಸಿದ್ದಾರೆ,ಅವರೇ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಎಸ್ ಳನ್ನು ಚಿಕಿತ್ಸೆಗೆ ದಾಖಲಿಸಿದ್ದು ಅವಳು ಚೇತರಿಸಿಕೊಂಡಿದ್ದಾಳೆ.ಇದು ಗ್ರಾಮಸ್ಥರು ಹೇಳಿದ ಮಾಹಿತಿಯಾಗಿದೆ.ಭಗ್ನ ಪ್ರೇಮಿಗಳಿಬ್ಬರೂ ಅನೈತಿಕ ಸಂಬಂಧದಿಂದಾಗಿ ವಿಷಪ್ರಾಶನದ ದಾರಿ ಹಿಡಿದ್ದಾರೆ.ಒಟ್ಟಾರೆಯಾಗಿ ಈ ಘಟನೆ ಎರೆಡೂ ಕುಟುಂಬಗಳ ನಡುವೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ.ಇದು ಅನೈತಿಕ ಸಂಬಂಧ ಹೊಂದಿ ಸಮಾಜದ ಸ್ವಾಥ್ಯ ಹಾಗೂ ಕುಟುಂಬಗಳ ನೆಮ್ಮದಿ ಹಾಳುಮಾಡುವವರಿಗೆ ಎಚ್ಚರಿಕೆಯ ಪಾಠವಾಗಿದೆ, ಅಕ್ರಮ ಸಂಬಂಧಗಳನ್ನು ಹೊಂದಿದವರಿಗೆ,ಹೊಂದಲು ಪ್ರಯತ್ನಿಸುವವರಿಗೆ ಸಂದೇಶವಾಗಿದೆ.ಮೃತ ಮದ್ದಪ್ಪನ ಪೋಷಕರು ನೀಡಿದ ದೂರಿನನ್ವಯ,ಕೂಡ್ಲಿಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published.


*