ಲಾಕ್ ಡೌನ್ ಎಫೆಕ್ಟ್:ಕೊರೋನಾದಿಂದ ಮುಕ್ತಿಗೊಳಿಸುವಂತೆ ಮನೆಯಲ್ಲಿಯೇ ಪ್ರಾಥ೯ನೆ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಲಾಕ್ ಡೌನ್ ಎಫೆಕ್ಟ್ ನಿಂದಾಗಿ ರಂಜಾನ್ ಹಬ್ಬದಲ್ಲಿ ಯೂ ಮುಸ್ಮೀಂ ಬಾಂಧವರು ತಮ್ಮ ತಮ್ಮ ಮನೆಯಲ್ಲಿಯೇ ತಮ್ಮ ಕುಟುಂಬ ಸದಸ್ಯರೊಡಗೂಡಿ ಪ್ರಾಥಿ೯ಸಿದರು.ಕೂಡ್ಲಿಗಿ ಪಟ್ಟಣದ ಮುಸ್ಮೀಂ ಮುಖಂಡರಾದ ಮಾದಳ್ಳಿ ನಜೀರ್ ರವರು ತಮ್ಮ ಮನೆಯಲ್ಲಿಯೇ ಕುಟುಂಬ ಸದಸ್ಯರೊಡಗೂಡಿ ನಮಾಜ್ ಮಾಡಿದರು.

ನಂತರ ಮಾತನಾಡಿ ರಂಜಾನ್ ಪ್ರಾಥ೯ನೆ ಸಂದಭ೯ದಲ್ಲಿ,ಜಗತ್ತನ್ನು ಕೊರೋನಾ ಮುಕ್ತಗೊಳಿ ಸಕಲ ಸಮೃದ್ಧಿಯನ್ನು ಸವ೯ರಿಗೂ ನೀಡುವಂತೆ ಪ್ರಾಥಿ೯ಸಲಾಗಿದೆ,ಎಲ್ಲಾ ಮುಸ್ಲೀಂ ಸಮುದಾಯದವರೂ ಕೂಡ ತಮ್ಮ ತಮ್ಮ ಮನೆಗಳಲ್ಲಿ,ಇದರಂತೆಯೇ ಅಲ್ಲಾ್ಹನಲ್ಲಿ ಪ್ರಾಥಿ೯ಸಿ ಸಂಕಲ್ಪ ವ್ಯಕ್ತಪಡಿಸಲಾಗಿದೆ ಎಂದು ಮಾದಳ್ಳಿ ನಜೀರ್ ರವರು ತಿಳಿಸಿದ್ದಾರೆ.ರಂಜಾನ್ ಹಬ್ಬದ ಸಂದಭ೯ದಲ್ಲಿ ಪಟ್ಟಣ ಹಾಗೂ ತಾಲೂಕಿನೆಲ್ಲೆಡೆಗಳಲ್ಲಿ ಮುಸ್ಲೀಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿಯೇ ದೇವರನ್ನು ಕುರಿತು ಪ್ರಾಥಿ೯ಸಿದರು.

Be the first to comment

Leave a Reply

Your email address will not be published.


*