ಕರಂಜೆ ಪರಿವಾರದಿಂದ 500 ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ್ :-ಕೊರೊನಾ ವೈರಸ್ ಹರಡುತ್ತಿರುವ ಪ್ರಯುಕ್ತ ಸಾಕಷ್ಟು ಜನರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸರ್ಕಾರವು ಈಗಾಗಲೇ ಆರ್ಥಿಕ  ನೆರವು ನೀಡುತ್ತಿದೆ. ಆದರೂ ಸರ್ಕಾರಕ್ಕೆ ನೆರವಾಗುವ ಉದ್ದೇಶದಿಂದ ಸ್ಥಿತಿವಂತರು ಬಡವರಿಗೆ ಸಹಾಯ ಮಾಡಲು ಮುಂದೆ ಬರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮನವಿ ಮಾಡಿದರು.

ಇಲ್ಲಿಯ ವಿದ್ಯಾನಗರ  ಬಡಾವಣೆಯಲ್ಲಿ  ಕರಂಜೆ ಪರಿವಾರದಿಂದ 500 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಅವರು  ಮಾತನಾಡಿದರು.

ಕನ್ನಡ ಸೇನೆ ಜಿಲ್ಲಾ ಅಧ್ಯಕ್ಷ ಧನರಾಜ ಕರಂಜೆ ಮಾತನಾಡಿ, ಕೋವಿಡ್ 19 ಸೋಂಕು ಹರಡುತ್ತಿರುವ ಭೀತಿಯಿಂದ ಸಣ್ಣ ಪುಟ್ಟ ಕೆಲಸಗಾರರು, ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದು ನಮ್ಮ ಕೈಲಾದಷ್ಟು ಸಹಕಾರ ನೀಡುತ್ತಿದ್ದೇನೆ’ ಎಂದು ತಿಳಿಸಿದರು.

ಪ್ರಮುಖರಾದ ವಿಜಯಕುಮಾರ ಆನಂದೆ, ಶಾಂತಕುಮಾರ, ಪ್ರದೀಪ ಚನಶೆಟ್ಟಿ, ಪ್ರಕಾಶ ಕನ್ನಾಳೆ ಇದ್ದರು.

Be the first to comment

Leave a Reply

Your email address will not be published.


*