ಮಾಸ್ಕ, ಸ್ಯಾನಿಟೈಜರ್ ವಿತರಿಸಿದ ತಾಪಂ ಅಧ್ಯಕ್ಷ ವಿಜಯಕುಮಾರ ಬರೂರ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ (ಅಂಬಿಗ ನ್ಯೂಸ್ ): ಬೀದರ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ವಿಜಯ್ಕುಮಾರ್ ಬರೂರ್ ಅವರು ಏ.28ರಂದು ಕೂಲಿ ಕಾರ್ಮಿಕರಿಗೆ ಮಾಸ್ಕ ಮತ್ತು ಸ್ಯಾನಿಟೈಜರಗಳನ್ನು ವಿತರಣೆ ಮಾಡಿದರು. ನರೇಗಾ ಯೋಜನೆಯಡಿಯಲ್ಲಿ ಬರೂರು ಗ್ರಾಪಂನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿದ ಅಧ್ಯಕ್ಷರು, ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಕರೋನಾ ವೈರಾಣು ತಡೆಯ ರಕ್ಷಣಾ ಸಾಮಗ್ರಿ ನೀಡಿ, ಕರೋನಾ ವೈರಸ್ ಬಾರದ ಹಾಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೀದರ ತಾಪಂನ ಸಹಾಯಕ ನಿರ್ದೇಶಕರಾದ ಶರತಕುಮಾರ ಅವರು ಇದ್ದರು.

Be the first to comment

Leave a Reply

Your email address will not be published.


*