ಮೌಡ್ಯವನ್ನು ತೊಡೆದು ಹಾಕಿ ಎಲ್ಲರೂ ಸಹೋದರರಂತೆ ಬಾಳೋಣ – ಹುಲಿಕಲ್ ನಟರಾಜ್

ಜೇವರ್ಗಿ :ಇದೆ ತಿಂಗಳು 29 ಮತ್ತು 30 ರಂದು ಲಿಂಗಸಗೂರುದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ರಾಜ್ಯಮಟ್ಟದ ಸಮ್ಮೇಳನ ನಡೆಯುವದು . ಈ ಸಮ್ಮೇಳನಕ್ಕೆ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಆಗಮಿಸಲಿದ್ದು ಕಾರ್ಯಕ್ರಮ ವಿಜೃಂಭಣೆಯಿಂದ ಜರುಗುವುದು ಕಲ್ಬುರ್ಗಿ ಜಿಲ್ಲೆ ಮತ್ತು ಜೇವರ್ಗಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಮೌಡ್ಯ ಮತ್ತು ಮೂಢನಂಬಿಕೆ ತೊಡೆದು ಹಾಕಿ ಸುಂದರ ಸಮಾಜ ನಿರ್ಮಿಸಲು ಕಂಕಣಭದ್ಧರಾಗೋಣ ಎಂದು ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷರಾದ ಹುಲಿಕಲ್ ನಟರಾಜ ಅವರು ಹೇಳಿದರು.ಇಂದು ಜೇವರ್ಗಿಗೆ ಆಗಮಿಸಿದ ಅವರು ಪ್ರವಾಸಿ ಮಂದಿರದಲ್ಲಿ ಸಭಿಕರನ್ನು ಉದ್ದೇಶೀಸಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶಿವಕುಮಾರ್ ಕಲ್ಲ ಜಿಲ್ಲಾ ಉಪಾಧ್ಯಕ್ಷರಾದ ನೀಲಕಂಠ ಅವಂಟಿ ಶರಣಬಸವ ಕಲ್ಲ ಸಿದ್ದನಗೌಡ ಬಿರಾದಾರ್ ಅಶೋಕ್ ಪಾಟೀಲ್ ಸದಾನಂದ ಪಾಟೀಲ್ ರುಕುಂ ತೋಲ ಬಾಹುಬಲಿ ಪರಶುರಾಮ್ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

ವರದಿ, ಸಿದ್ದನಗೌಡ ಬಿರೆದಾರ್ ಜೇವರ್ಗಿ ತಾಲೂಕ

Be the first to comment

Leave a Reply

Your email address will not be published.


*