ಅಂತರ್ರಾಷ್ಟ್ರೀಯ “ಕರಾಟೆ” ಸ್ಪರ್ಧೆಗೆ ಆಯ್ಕೆಯಾದ ಭಾಗ್ಯಶ್ರೀ ಆರ್ಥಿಕ ಸಾಹಾಯ ನೀಡಿದ ನೌಕರ ಸಂಘದ ಸದಸ್ಯರು

ಇಂಡೋನೇಷಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಗೆ  ಕೋಲಿ ಸಮುದಾಯದ  ಭಾಗ್ಯಶ್ರೀ ಇವರು ಆಯ್ಕೆ. ಈ ಕ್ರೀಡಾಪಟು ತುಂಬಾ ಬಡತನ ಕುಟುಂಬದವರಾಗಿದ್ದು,ಅವರು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಆಗುವ ವೆಚ್ಚಗಳಿಗೆ ಅನುಕೂಲವಾಗಲು ಈಗಾಗಲೇ ಹಲವಾರು ಸಂಘ ಸಂಸ್ಥೆಗಳು, ಸಮುದಾಯದ ಹಲವಾರು ಜನರು ಆರ್ಥಿಕ ಸಹಾಯ ನೀಡಿರುವುದ್ದಾರೆ,ಈ ವಿಷಯವನ್ನು ಕಲಬುರಗಿ ಜಿಲ್ಲೆಯ ಕೋಲಿ ಕಬ್ಬಲಿಗ ನೌಕರರ ಸಂಘದ ಅದ್ಯಕ್ಷರಾದ ನೀಲಕಂಠ ಜಮಾದಾರ ಗಮನಕ್ಕೆ ಬಂದ ತಕ್ಷಣ  ಕೂಡಲೇ ಸಂತೋಷ ತೊಟ್ನಳ್ಳಿ,ಸಿದ್ದಪ್ಪ ಜಿ ಮಹಾಗಾಂವ, ಧರ್ಮರಾಜ ಜವಳಿ,ಚಂದ್ರಕಾಂತ ತಳವಾರ,ಸಂತೋಷ ಬೆಳಗುಂಪಿ,ಸಿದ್ದಣ್ಣ ಮುಕರಂಬಿ, ದಾದಾಸಾಬ ಹೊಸೂರ, ನೀಲಕಂಠ ಜಮಾದಾರ, ಚನ್ನಪ್ಪ ಮುನೋಳ್ಳಿ, ಹಾಗೂ ಅವ್ವಣ್ಣ ಮ್ಯಾಕೇರಿ ಇವರಿಂದ ದೇಣಿಗೆ ಸಂಗ್ರಹಿಸಿ ಒಟ್ಟು 13,000=00 (ಹದಿಮೂರು ಸಾವಿರ) ನಗದು ಹಣವನ್ನು  ಶ್ರೀ ಶ್ರೀ ಶಾಂತಭೀಷ್ಮ ಚೌಡಯ್ಯ ಗುರುಗಳಿಂದ  ಸಹೋದರಿಗೆ ನೀಡಿದರು

      ಕ್ರೀಡಾಪಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಯಶಾಲಿ ಆಗಲಿ ಎಂದು ಎಲ್ಲ ಗಣ್ಯರು ಶುಭ ಕೋರಿದರು

 

 

Be the first to comment

Leave a Reply

Your email address will not be published.


*