“ನನ್ನ ದೇಶ ನನ್ನ ಮಣ್ಣು” ಅಮೃತ ಕಳಸ ಹಸ್ತಾಂತರ..!!

ವರದಿ: ಬಸವರಾಜ ಕುಂಬಾರ

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

ತಾಲೂಕು ಪಂಚಾಯತಿ ಮುದ್ದೇಬಿಹಾಳದಲ್ಲಿ ಅಮೃತ ಮಹೋತ್ಸವ ಹಿನ್ನಲೆಯಲ್ಲಿ “ನನ್ನ ಮಣ್ಣು ನನ್ನ‌ ದೇಶ”ಅಭಿಯಾನ ಭಾಗವಾಗಿ ತಾಲ್ಲೂಕಿನ 21 ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಿದ ಪವಿತ್ರ ಮಣ್ಣನ್ನು *”ಅಮೃತ ಕಳಸ”* ಮೂಲಕ ನೆಹರು ಯುವ ಕೇಂದ್ರದ ಸ್ವಯಂ ಸೇವಕರಿಗೆ ಹಸ್ತಾಂತರಿಸಲಾಯಿತು.

ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜೀವ ಜುನ್ನೂರ ಅವರು “ಅಮೃತ ಕಳಸ”ಕ್ಕೆ 21 ಗ್ರಾಮ ಪಂಚಾಯತಿಗಳ ಮಣ್ಣನ್ನು ಹಾಕಿ ಕಳಸವನ್ನು ನೆಹರು ಯುವಕೇಂದ್ರದ ಸ್ವಯಂ ಸೇವಕರಾದ ಯೂನಸ್ ಆಹ್ಮದ್ ತುರಕನಗೇರಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಿಡಿಪಿಒ ಮಂಜುನಾಥ ಹೊಸಮನಿ, ತಾಲೂಕು ಪಂಚಾಯತಿಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, *”ಅಮೃತ ಕಳಸಕ್ಕೆ”* ಶುಭ ಆರೈಸಿದರು.

Be the first to comment

Leave a Reply

Your email address will not be published.


*