ಲಿಂಗಸುಗೂರ ಕ್ಷೇತ್ರದಲ್ಲಿ ಮಾನಪ್ಪ ವಜ್ಜಲ್ 30.000 ಸಾವಿರ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗುತ್ತಾರೆ. ಬಿಜೆಪಿಯ ಮಾಜಿ.ಮುಖ್ಯ ಮಂತ್ರಿ ಯಡಿಯೂರಪ್ಪ.

ಲಿಂಗಸುಗೂರ ಪಟ್ಟಣದಲ್ಲಿ ಇಂದು ನೆಡೆದ ಬಿಜಿಪಿ.ಪಕ್ಷದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿಮಂತ್ರಿ ಯಡಿಯೂರಪ್ಪ ಲಿಂಗಸುಗೂರ ಕ್ಷೇತ್ರದಲ್ಲಿ ಈ ಬಾರಿ ಮಾನಪ್ಪ ವಜ್ಜಲರನ್ನು ಸುಮಾರು 30.000 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಅವರನ್ನು 2023 ರ ಚುನಾವಣೆ ಯಲ್ಲಿ ಗೆಲ್ಲಿಸಿ ಅವರನ್ನು ವಿಧಾನಸಭೆಗೆ ಶಾಸಕರನ್ನಾಗಿ ಕಳುಹಿಸಬೇಕೆಂದರು.

ಬಿಜೆಪಿ ಪಕ್ಷವು ದಿನ ದಲಿತರ ಶೋಷಿತರ ಮಹಿಳೆಯರ ಬಡವರ ಅಭಿವೃದ್ಧಿ ಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರವು ಹಲವಾರು ಯೋಜನೆಗಳನ್ನು ತಂದಿದ್ದು ಅವರೆಲ್ಲರಿಗೂ ಉತ್ತಮ ಜೀವನ ನೆಡೆಸಲು ಸರ್ವರಿಗೂ ಸಮ ಬಾಳು ಎಂಬಂತೆ ನುಡಿದಂತೆ ನೆಡೆಯುವ ಮೋದಿ ಸರಕಾರವು ಡಬಲ್ ಇಂಜಿನ್ ಸರ್ಕಾರವಿದೆ. ಲಿಂಗಸುಗೂರ ಕ್ಷೇತ್ರ ವನ್ನು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತಂದು ಲಿಂಗಸುಗೂರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಈ ಬಾರಿ ಮಾನಪ್ಪ ವಜ್ಜಲರನ್ನು ಆರಿಸಿ ತರ ಬೇಕೆಂದರು. ಈ ಸಂದರ್ಭದಲ್ಲಿ

ರಾಜಾ ಅಮರೇಶ್ವರ ನಾಯಕ, ಬಸವರಾಜ ಪಾಟೀಲ್ ಅನ್ವರಿ, ರಾಜಾ ಸೋಮನಾಥ ನಾಯಕ, ಶಿವಬಸಪ್ಪ ಹೆಸರೂರು, ಜುವಲೆಪ್ಪ ನಾಯಕ, ನಾರಾಯಣಪ್ಪ ನಾಯಕ, ಹನುಮಂತಪ್ಪ ಕಂದಗಲ್, ಮುದಕಪ್ಪ ವಕೀಲರು, ಇನ್ನಿತರ ಬಿಜೆಪಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*