ಪರಿಸರ ಪ್ರೇಮಿ , ಉಚ್ಚಾಹಿ , ಆದರ್ಶ ಯುವ ಶಾಸಕಿ ಪ್ರಶಸ್ತಿಗೆ ಭಾಜನರಾದ ಜಯನಗರ ಎಂಎಲ್ಎ ಸೌಮ್ಯಾ ರೆಡ್ಡಿ.

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


   ನಮ್ಮವರು.ಹೆಮ್ಮೆಯವರು


ಬೆಂಗಳೂರು:ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆದರ್ಶ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ “ಆದರ್ಶ ಯುವ ಶಾಸಕಿ” ಪ್ರಶಸ್ತಿ ನೀಡಿ ಗೌರವಿಸಿದೆ.


                           ಜಾಹಿರಾತು


ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸೌಮ್ಯರೆಡ್ಡಿ ಶಾಸಕರಾದ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದ್ದರು. ಆಕೆಯಲ್ಲಿರುವ ಪರಿಸರ ಬಗೆಗಿನ ಕಾಳಜಿ, ಪ್ಲಾಸ್ಟಿಕ್ ವಿರುದ್ಧದ ಅಭಿಯಾನ, ಸಹಜವಾಗಿ ಎಲ್ಲರೊಂದಿಗೆ ಬೆರೆಯುವ ಗುಣ ಮತ್ತು ಶಾಸಕಿ ಎನ್ನುವ ಯಾವ ಗತ್ತೂ ಇಲ್ಲದೇ ಕೆಲಸದಲ್ಲಿಯೇ ತಮ್ಮನ್ನು ಕಾಣುವ ನಡೆಯಿಂದ ಕ್ಷೇತ್ರದಲ್ಲಿ ಇವರು ಚಿರಪರಿಚಿತ.

Be the first to comment

Leave a Reply

Your email address will not be published.


*