ಗ್ರಾಮೀಣ ಭಾಗದಲ್ಲಿ ಬಿಜೆಪಿ ಸ್ವಕ್ಷೇತ್ರ ಅಭ್ಯರ್ಥಿ ಮೋಹನ್ ಕೃಷ್ಣ ಪ್ರಚಾರ ಪ್ರಾರಂಭ*

ಕೆಜಿಎಫ್: ಸಮಾಜ ಸೇವಕ ಸ್ವ ಕ್ಷೇತ್ರ ಅಭ್ಯರ್ಥಿ ಆಗಿರುವಂತ ಮೋಹನ್ ಕೃಷ್ಣ ಅವರು ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಭಾರತೀಯ ಜನತಾ ಪಕ್ಷದ ಬಿ.ಫಾರಂ ದೊರೆಯುವ ನಿರೀಕ್ಷೆಯಲ್ಲಿ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಗ್ರಾಮದಲ್ಲಿನ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದು ಸಾರ್ವಜನಿಕರ ಆಶೀರ್ವಾದ ಪಡೆಯುತ್ತಿದ್ದಾರೆ.

 

ಪಕ್ಷದ ಪದಾಧಿಕಾರಿಗಳು ಸಾಥ್: ಭಾರತೀಯ ಜನತಾ ಪಕ್ಷದ ಕೆಜಿಎಫ್ ನಗರ ಘಟಕ ಅಧ್ಯಕ್ಷರಾದ ಕಮಲನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಜಯ್ ಪ್ರಕಾಶ್ ನಾಯ್ಡು ಅವರು ಮೋಹನ್ ಕೃಷ್ಣ ಅವರೊಂದಿಗೆ ಕೈ ಜೋಡಿಸಿ ಪಕ್ಷದ ಸಂಘಟನೆ ಮತ್ತು ಮುಂದಿನ ಚುನಾವಣೆಯಲ್ಲಿ ಮೋಹನ್ ಕೃಷ್ಣ ಅವರಿಗೆ ತಮ್ಮ ಮತವನ್ನು ಚಲಾಯಿಸಿ ನಮ್ಮ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದರಿಂದ ನಮಗೆ ಅನುಕೂಲ ಮತ್ತು ಅಭಿವೃದ್ಧಿ ಕಾರ್ಯ ನಡೆಯುತ್ತದೆ.

 

 

ಬಿಜೆಪಿ ಪಕ್ಷದ ಕಾರ್ಯಕ್ರಮ ಗಳಾದ ವಿಜಯ ಸಂಕಲ್ಪ ಯಾತ್ರೆ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮಗಳನ್ನು ಪ್ರತಿಯೊಂದು ಗ್ರಾಮದಲ್ಲಿಯೂ ಮೋಹನ್ ಕೃಷ್ಣ ಯುವ ಸೇನಾ ಕಾರ್ಯಕರ್ತರು ಮತ್ತು ಮುಖಂಡರು ಮಾಡುತ್ತಿದ್ದಾರೆ .

 

ಎನ್ ಜಿ ಹುಲ್ಕೂರ್ ಗ್ರಾಂಪಂಯ ಪ್ರತಿಯೊಂದು ಗ್ರಾಮದ ಮನೆ ಮನೆಗೂ ಭೇಟಿ ಹಾಗೂ ‘ಮೋಹನ್ ಕೃಷ್ಣ ನಡೆ ಹಳ್ಳಿ ರೈತರ ಕಡೆ’ ಹಾಗೂ ಬಿಜೆಪಿ ಪಕ್ಷವನ್ನು ಬಳಪಡಿಸುವುದು, ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಮನೆ ಮನೆಗೂ ತೆರಳಿ ಹಿರಿಯ ಮುಖಂಡರ ಆಶೀರ್ವಾದ ಪಡೆದರು.

 

ಈ ಸಂದರ್ಭದಲ್ಲಿ ಗ್ರಾಮಾಂತರ ಘಟಕದ ಅಧ್ಯಕ್ಷರಾದ ಜಯಪ್ರಕಾಶ್ ನಾಯ್ಡು,ನಗರ ಘಟ್ಟಕದ ಅಧ್ಯಕ್ಷರಾದ ಕಮಲಾನಥನ್, ಪ್ರಭಾವಿ ಮುಖಂಡರಾದ ನವೀನ್ ರಾಮ್,ಪ್ರೆಸ್ ರವಿ, ಕೇಶವ ಗೌಡ ,ಶ್ರೀರಾಮ್ ಗೌಡ, ಆನಂದ್ ಗೌಡ, ಚಲಪತಿ,ಟಿಪಿ ಬಾಬು, ಪೆದ್ದನ್ನ,ಬಾಬು ರೆಡ್ಡಿ, ಮುರಳಿ, ರಘು, ಜಗದಭಿರಾಂ, ಮೋಹನ್, ಬಾಲಚಂದ್ರ ಪಾಲ್, ಮಂಜುನಾಥ್ ಗೌಡ, ರವಿ ರೆಡ್ಡಿ, ಅರವಿಂದ್, ಶಿವು,ಸುರೇಶ್, ಸ್ಥಳೀಯ ಮುಖಂಡರು ಗ್ರಾಮಸ್ಥರು ಇದ್ದರು.

Be the first to comment

Leave a Reply

Your email address will not be published.


*