ಮಾಧ್ಯಮ ರತ್ನ ಪ್ರಶಸ್ತಿಗೆ ಜೆ. ನಾಗರಾಜ್ ಪೂಜಾರಿ ಆಯ್ಕೆ,

ಕಾರಟಗಿ: ಸೆ:03: ಪತ್ರಿಕೆ ಮಾಧ್ಯಮ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ಜೆ. ನಾಗರಾಜ್ ಪೂಜಾರಿ ಇವರು ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ,

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಸೆ 04 ರಂದು ಬಳ್ಳಾರಿಯ ಬಿ ಡಿ ಎ ಎ ಪುಟ್ಬಾಲ್ ಸಭಾಂಗಣದಲ್ಲಿ ನಡೆಯುವ ಪತ್ರಿಕೆ ದಿನಾಚರಣೆ ಹಾಗೂ ರಾಜ್ಯ ಪದಾಧಿಕಾರಿಗಳು ಪದ ಗ್ರಹಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರು ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 10.30 ರಿಂದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸಾಂಸ್ಕೃತಿಕ ಸಂಭ್ರಮದ ಸಮಾರಂಭಕ್ಕೆ ಸಾರಿಗೆ ಸಚಿವರು ಬಿ ಶ್ರೀ ರಾಮುಲು, ಸೈದುಲಾ ಅಡಾವತ್ ಪೊಲೀಸ್ ವರಿಷ್ಟಧಿಕಾರಿಗಳು ಬಳ್ಳಾರಿ, ಶಾಸಕರು ಜಿ.ಸೋಮಶೇಖರ್ ರೆಡ್ಡಿ,
ಲಿಂಗಮೂರ್ತಿ ಜಿ, ಸಿ ಇ ಓ ಜಿಲ್ಲಾ ಪಂಚಾಯತ್ ಬಳ್ಳಾರಿ,
ಶಾಸಕರು ಬಿ ನಾಗೇಂದ್ರ, ಜಿ.ಕರುಣಾಕರ ರೆಡ್ಡಿ ಇನ್ನಿತರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ, ಜೆ.ನಾಗರಾಜ್ ಪೂಜಾರಿ ಇವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕಾರಕ್ಕೆ ಕಾರಟಗಿ ತಾಲೂಕು ಪತ್ರಕರ್ತರು ಸಂಘದ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ,

Be the first to comment

Leave a Reply

Your email address will not be published.


*