ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಸಮನ್ವಯ ಸೇವಾಶ್ರಮಕ್ಕೆ 25 ಸಾವಿರ ದೇಣಿಗೆ

ವರದಿ: ಅಮರೇಶ ಕಾಮನಕೇರಿ


 


ಅಥಣಿ : ಅಥಣಿ ತಾಲೂಕಾ ಗಂಗಾಮತ ಕೋಳಿ (ತಳವಾರ) ಸಮಾಜ ಸೇವಾ ಸಂಘವು

ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 900 ನೇ ಜಯಂತಿ ಸಮಾರಂಭದಲ್ಲಿ ಚಮಕೇರಿಯ ಸಮನ್ವಯ ಸೇವಾಶ್ರಮಕ್ಕೆ ಸಮಾಜದ ವತಿಯಿಂದ ರಾಜು ಜಮಖಂಡಿಕರ ಮಹಾದೇವ ಬಿರಾದಾರ ಅವರಿಗೆ 25 ಸಾವಿರ ನಗದು ನೀಡಿ, ಅಂಬಿಗರ ಚೌಡಯ್ಯ ಪ್ರಶಸ್ತಿಯೊಂದಿಗೆ ಸನ್ಮಾನಿಸಿದರು.
ಕವಲಗುಡ್ಡದ ಪರಮಪೂಜ್ಯ ಶ್ರೀ ಅಮರೇಶ್ವರ ಮಹಾರಾಜರು ಸಾನಿದ್ಯವಹಿಸಿದ್ದರು. ಹೊನವಾಡದ ಬಾಬು ಮಹಾರಾಜರು ನೇತೃತ್ವ ವಹಿಸಿದ್ದರು. ಅ. ಕ. ಅಂ. ಚೌ ಮಹಾಸಭಾ ರಾಜ್ಯಾದ್ಯಕ್ಷೆ ಶ್ರೀಮತಿ ಅಂಬಿಕಾ ಜಾಲಗಾರ, ಧುರೀಣ ಗಜಾನನ ಮಂಗಸೂಳಿ, ಎಸ್ ಎನ್ ಕಾಂಬಳೆ, ಶ್ರೀಶೈಲ ಗಸ್ತಿ ಸೇರಿದಂತೆ ಸಾವಿರಾರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*