ಬೈಕ್​​ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್:ಮೂವರಿಗೆ ಗಾಯ

ವರದಿ:ಶಾಂತಯ್ಯ ಯಾವಗಲ್ಲಮಠ

ಗುಡೂರ:

ಬೈಕಿಗೆ ಸಾರಿಗೆ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸೇರಿದಂತೆ ಮೂವರಿಗೆ ತೀವ್ರ ಪೆಟ್ಟಾದ ಘಟನೆ ಗುರುವಾರ ಸಂಜೆ ಗುಡೂರ ಮುರಡಿ ಗ್ರಾಮದ ಬಳಿ ನಡೆದಿದೆ.

ಸಮೀಪದ ಇಲಕಲ್ ತಾಲ್ಲೂಕ ಗುಡೂರ(ಎಸ್.ಸಿ) ಗ್ರಾಮದ ಮುನೀರಬಾಷಾ ಕಂದಗಲ್ ತನ್ನ ಸ್ನೇಹಿತರಾದ ಅಮೀನ ಬುಡೇಸಾಬ ಕಂದಗಲ್ ಹಾಗೂ ಯಾಸೀನ ಕಾಶಿಂಸಾಬ ರಾಂಪೂರ ಅವರುಗಳನ್ನು ಕೂರಿಸಿಕೊಂಡು, ಗುಡೂರಿನಿಂದ ಮುರಡಿಯ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ವೇಗವಾಗಿ ಬಂದ ಬಾದಾಮಿ ಘಟಕದ ವಾಕರಾರಸಾ ಸಂಸ್ಥೆ ಬಸ್ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹದಲ್ಲಿದ್ದ ಮೂವರಿಗೂ ತಲೆ, ಮುಖ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಬಾಗಲಕೋಟೆ ಸರ್ಕಾರಿ ದವಾಖಾನೆಗೆ ದಾಖಲಿಸಲಾಗಿದೆ.

Be the first to comment

Leave a Reply

Your email address will not be published.


*