ಸತತ 732ನೇ ದಿನದ ಅನ್ನದಾಸೋಹ ಕಾರ್ಯಕ್ರಮ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ಬೆಂಗಳೂರು 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನ್ನದಾಸೋಹ ಸಮಿತಿಯ ವತಿಯಿಂದ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಸುಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

CHETAN KENDULI

ಕಾರ್ಯಕ್ರಮದ ದಾನಿಗಳಾದ ದಿಲೀಪ್ ಕುಮಾರ್ ಮಾತನಾಡಿ ಎರಡು ವರ್ಷಗಳು ಅನ್ನದಾಸೋಹ ನಡೆಸುವುದು ಸಾಮಾನ್ಯವಾದ ವಿಷಯವಲ್ಲ ತುಂಬಾ ಕಷ್ಟಕರವಾದ ಸಂಗತಿಯಾಗಿದೆ ಮಲ್ಲೇಶ್ವರ ತಂಡ ಯಶಸ್ವಿಯಾಗಿ ಎರಡು ವರ್ಷಗಳಿಂದ ಅನ್ನದಾಸೋಹ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದು ನಿರಾಶ್ರಿತ ಕಡುಬಡವರಿಗೆ ಹಸಿವನ್ನು ನೀಗಿಸುವ ಕೆಲಸವನ್ನು ಅನ್ನದಾಸೋಹ ಸಮಿತಿ ಮಾಡುತ್ತಿದೆ ಸಮಿತಿಯ ಮುಖ್ಯಸ್ಥರಿಗೆ ಹಾಗೂ ಸದಸ್ಯರಿಗೆ ಶುಭವಾಗಲಿ ಎಂದು ಹಾರೈಸಿದರು

ಕಾರ್ಯಕ್ರಮದಲ್ಲಿ ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕಲ ನಾಗರಾಜು ಮಾತನಾಡಿ ಹಸಿದ ಹೊಟ್ಟೆಗಳಿಗೆ ಊಟ ನೀಡುವ ಕಾರ್ಯವನ್ನು ಮಲ್ಲೇಶ್ ಮತ್ತು ತಂಡ ನಡೆಸುತ್ತಿದೆ ಮುಂದೆಯೂ ಕೂಡ ಈ ಕಾರ್ಯಕ್ರಮವು ಸುಗಮವಾಗಿ ಸಾಗಲಿ ದಾನಿಗಳ ನೆರವು ಸದಾ ದೊರೆಯಲಿ ಎಂದು ಹಾರೈಸಿದರು

ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಪಿಸಿ ಲಕ್ಷ್ಮೀನಾರಾಯಣ್ ಮಾತನಾಡಿ ಅನ್ನದಾಸೋಹ ಕಾರ್ಯಕ್ರಮವು ಮಾದರಿ ಕಾರ್ಯಕ್ರಮವಾಗಿದ್ದು ದಾನಿಗಳಿಗೆ ಉತ್ತಮ ವೇದಿಕೆಯಾಗಿದೆ ದಾನಿಗಳು ತಮ್ಮ ಹುಟ್ಟುಹಬ್ಬ ಶುಭ ಸಮಾರಂಭಗಳನ್ನು ಈ ವೇದಿಕೆಯಲ್ಲಿ ಆಚರಿಸಿಕೊಳ್ಳುವುದು ವಿಶೇಷತೆಯನ್ನು ಪಡೆದಿದೆ ಮುಂದೆಯೂ ದಾನಿಗಳ ನೆರವು ಸದಾ ಈ ಕಾರ್ಯಕ್ರಮಕ್ಕೆ ದೊರೆಯಲಿ ಎಂದು ಹಾರೈಸಿದರುಕಾರ್ಯಕ್ರಮದಲ್ಲಿ ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹೆಬೂಬ್ ,ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ಅಧ್ಯಕ್ಷರಾದ ಎ.ಸಿ .ಅಶೋಕ್ ಯೋಗ ಕೃಷ್ಣಪ್ಪ ಅನ್ನದಾಸೋಹ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*