ಹುನಶ್ಯಾಳ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ.

ವರದಿ: ದಾನೇಶ ಕೇಸರಿ

ಜಿಲ್ಲಾ ಸುದ್ದಿಗಳು 

 

ದೇವರಹಿಪ್ಪರಗಿ

CHETAN KENDULI

ರೈತ ಸಾಲ ಬಾಧೆ ತಾಳಲಾರದೆ ರವಿವಾರ ಮುಂಜಾನೆ 6:00 ಗಂಟೆಗೆ ನೇಣಿಗೆ ಶರಣಾದ ಘಟನೆ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ.ಮಡಿವಾಳಪ್ಪ ಕಾಸಪ್ಪ ಕುಂಟೋಜಿ(61)ಮೃತದುರ್ದೈವಿ.ಹೆಂಡತಿ ಹಾಗೂ ಇಬ್ಬರು ಗಂಡು ಮಕ್ಕಳು ಇದ್ದರು ಎಂದು ತಿಳಿದು ಬಂದಿದೆ.ಬ್ಯಾಂಕ್ ಆಫ್ ಬರೋಡಾ ಕಲಕೇರಿ ಬ್ಯಾಂಕಿನಲ್ಲಿ 85 ಸಾವಿರ,ಪಿಕೆಪಿಎಸ್ ಬ್ಯಾಂಕ್ ಆಲಗೂರ 55 ಸಾವಿರ, ಪಟ್ಟಣ ಸಹಕಾರಿ ಕಲಕೇರಿ ಬ್ಯಾಂಕಿನಲ್ಲಿ 4.5 ಲಕ್ಷ ರೂ, ಒಟ್ಟು 5 ಲಕ್ಷ 85 ಸಾವಿರ ರೂ ಹಾಗೂ ಹೊರಗಡೆ ಕೈಸಾಲ 3 ಲಕ್ಷ ರೂ ಸಾಲ ಮಾಡಿಕೊಂಡಿದ್ದು, ಹೊಲದಲ್ಲಿ ಬೆಳೆ ಕೈ ಕೊಟ್ಟು ಕಾರಣ ಮನನೊಂದು ರೈತ ಆತ್ಮಹತ್ಯೆ.ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದು ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Be the first to comment

Leave a Reply

Your email address will not be published.


*