ಸಿಂಧನೂರು ಬಂದ್ ಗೆ KRS ಪಕ್ಷದ ಸಂಪೂರ್ಣ ಬೆಂಬಲ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಸಿಂಧನೂರು

ಗಣರಾಜ್ಯೋತ್ಸವದ ದಿನ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಬಾಬಾ ಸಾಹೇಬರ ಫೋಟೋ ಗೆ ಮಾಲಾರ್ಪಣೆ ಮಾಡಲು ಒಪ್ಪದೇ ಇರುವ ವಿಷಯದ ಕುರಿತು ದಿನಾಂಕ 31.01.2022 ರಂದು ವಿವಿಧ ದಲಿತ ಸಂಘಟನೆಗಳು,ಕನ್ನಡಪರ ಸಂಘಟನೆಗಳು ಒಟ್ಟು ಗೂಡಿ ಮಾಡಲಿರುವ ಸಿಂಧನೂರು ಬಂದ್ ಕರೆಗೆ KRS ಪಕ್ಷದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು KRS ಪಕ್ಷದ ಜಿಲ್ಲಾ ಘಟಕ ತಿಳಿಸಿದೆ.

CHETAN KENDULI

ಇದೇ ಸಂದರ್ಭದಲ್ಲಿ ಮಾತನಾಡಿದ KRS ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿರುಪಾದಿ ಕೆ. ಗೋಮರ್ಸಿ ಸಿಂಧನೂರು ಬಂದ್ ಯಶಸ್ವಿ ಗೊಳಿಸಲು KRS ಪಕ್ಷದ ಕಾರ್ಯಕರ್ತರು ಸರಕಾರಿ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ, ಸಾರ್ವಜನಿಕ ಆಸ್ತಿ,ಸಂಪತ್ತಿಗೆ ಹಾನಿ ಮಾಡುವುದು ಬೇಡ… ಹೋರಾಟವು ಶಾಂತಿ ರೀತಿಯ ಹಾಗೂ ನ್ಯಾಯ ಪರವಾದ, ಜನಪರವಾದ ಹೋರಾಟ ಆಗಿರಲಿ ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ KRS ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ್ ಮ್ಯಾಕಲದೊಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ S ನಜೀರ್, ಸಿಂಧನೂರು ತಾಲೂಕಿನ ಅಧ್ಯಕ್ಷರು, ಪಕ್ಷದ ಸರ್ವ ಪದಾಧಿಕಾರಿಗಳು ಸೇರಿದಂತೆ ಸರ್ವ ಸದಸ್ಯರಿದ್ದರು.

Be the first to comment

Leave a Reply

Your email address will not be published.


*