ಆಟಕ್ಕುಂಟು ಲೆಕ್ಕಕ್ಕಿಲ್ಲ ಪಶು ವೈದ್ಯ ಆಸ್ಪತ್ರೆ – ರೈತರ ಪರದಾಟ – ಚುನಾಯಿತ ಜನಪ್ರತಿಧಿಗಳು ಮೌನಕ್ಕೆ ಶರಣು

ವರದಿ ಓಂಕಾರ ಎಸ್ ವಿ ತಾಳಗುಪ್ಪ

ಜಿಲ್ಲಾ ಸುದ್ದಿಗಳು 

ತಾಳಗುಪ್ಪ

ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪದಲ್ಲಿರುವ ಈ ಪಶು ವೈದ್ಯ ಆಸ್ಪತ್ರೆಯು ಸುತ್ತಮುತ್ತಲಿನ ರೈತರ ಜಾನವಾರುಗಳು , ಸಾಕು ಪ್ರಾಣಿಗಳ ಅರೋಗ್ಯಕ್ಕಾಗಿ ಸೇವೆ ಸಲ್ಲಿಸಬೇಕಾಗಿದ್ದ ಈ ಪಶು ವೈದ್ಯ ಆಸ್ಪತ್ರೆ ಕಳೆದ ಒಂದೂವರೆ ವರ್ಷದಿಂದ ಪಶು ವೈದ್ಯರೇ ಇಲ್ಲಾ, ಪಶು ನಿರೀಕ್ಷಕರು ( inspector) ಇಲ್ಲಾ. ಈ ಪಶು ವೈದ್ಯ ಆಸ್ಪತ್ರೆಯಲ್ಲಿ “ಡಿ” ದರ್ಜೆ ನೌಕರನೇ ಸಾರ್ವಭೌಮ.

*ಕಾರಣ*

CHETAN KENDULI

*ತಾಳಗುಪ್ಪದಲ್ಲಿರುವ ಪಶು ವೈದ್ಯ ಆಸ್ಪತ್ರೆ ಅವಲಂಬಿತ ಜಾನವಾರುಗಳ ಪಾಡು ಹೇಳತೀರದು, ಸಕಾಲದಲ್ಲಿ ಜಾನವಾರುಗಳಿಗೆ, ಸಾಕು ಪ್ರಾಣಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯದೇ ಅಪಾರವಾದ ನಷ್ಟವುಂಟಾಗುತ್ತಿದ್ದೂ ಅಲ್ಲದೇ ಹೈನುಗಾರಿಕೆ ಕೂಡ ಕುಂಠಿತವಾಗಿದ್ದೂ, ಹೈನುಗಾರಿಕೆಯನ್ನೇ ಅವಲಂಬಸಿದ ಹಲವು ರೈತ ಕುಟುಂಬಗಳು ಬೀದಿಗೆ ಬಂದಿವೆ.

 

*ಮನವಿ*

ಗೋ ಸಂಪತ್ತು ರಾಷ್ಟ್ರ ಸಂಪತ್ತು ಎಂದು ಪ್ರಚಾರಕ್ಕೆ ಮಾತ್ರ ಸೀಮಿತವಾದ ಬಿಜೆಪಿ ಪಕ್ಷದ ಸರ್ಕಾರ ರೂಢರು ಕೂಡಲೇ ತಾಳಗುಪ್ಪ ಪಶು ಆಸ್ಪತ್ರೆಗೆ ವೈದ್ಯರನ್ನು – ಪಶು ನಿರೀಕ್ಷಕ(inspector) ರನ್ನು ಕರ್ತವ್ಯಕ್ಕೆ ನೇಮಿಸುವಂತೆ ಶಿವಮೊಗ್ಗ ಜಿಲ್ಲಾ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಹಾಗೂ ಸ್ಥಳೀಯ ಶಾಸಕರಾದ ಶ್ರೀ ಕುಮಾರ್ ಬಂಗಾರಪ್ಪ ರವರಲ್ಲಿ ರೈತರು – ಸಾಕು ಪ್ರಾಣಿಗಳ ಮಾಲೀಕರುಗಳು ಮನವಿ ಮಾಡಿದ್ದಾರೆ… ಅಂಬಿಗಾ ನ್ಯೂಸ್

Be the first to comment

Leave a Reply

Your email address will not be published.


*