ಕಾಡಿನಲ್ಲಿ  ಯುವತಿಯ ಕತ್ತು ಸೀಳಿ ಹತ್ಯೆ:: ದೊಡ್ಡಬಳ್ಳಾಪುರ ಪೋಲಿಸರಿಂದ ತನಿಖೆ ಚುರುಕು

ವರದಿ: ಅಮರೇಶ ಕಾಮನಕೇರಿ


       ಕ್ರೈಂ- ಫೋಕಸ್


ದೊಡ್ಡಬಳ್ಳಾಪುರ: ಕುರಿ ಕಾಯಲು ಹೋಗಿದ್ದ ಯುವತಿಯ ಕತ್ತುಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಲಿಂಗನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

  ಕಾಡಿನಲ್ಲಿ ಕೊಲೆಯಾದ ಯುವತಿ. ಅಂಜಲಿ ಇಂದು ಬೆಳಗ್ಗೆ ತಮ್ಮನ ಜತೆ ಕುರಿ ಕಾಯಲು ಹೋಗಿದ್ದಳು. ಮಧ್ಯಾಹ್ನ ಅಂಜಲಿ ಒಬ್ಬಳನ್ನೇ ಬಿಟ್ಟು ಆಕೆಯ ತಮ್ಮ ಊಟಕ್ಕೆ ಬಂದಿದ್ದ. ಬಳಿಕ ಅಂಜಲಿ ಒಬ್ಬೊಂಟಿಯಾಗಿರುವುದನ್ನು ನೋಡಿಕೊಂಡು ಕತ್ತುಸೀಳಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಅಂಜಲಿ ಲಿಂಗನಹಳ್ಳಿ ನಿವಾಸಿಗಳಾದ ರಾಜಣ್ಣ ಹಾಗೂ ರತ್ನಮ್ಮ ದಂಪತಿಯ ಮಗಳು. ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದ ಅಂಜಲಿಗೆ ಮದುವೆ ತಯಾರಿ ನಡೆಯುತ್ತಿತ್ತು. ಇದೀಗ ಅಂಜಲಿಯ ಕೊಲೆಯಯಾಗಿದ್ದು, ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


  •                     ADV—2


Be the first to comment

Leave a Reply

Your email address will not be published.


*