ಡಿಸೆಂಬರ್ ೧೬ ರಂದು ಗಣೇಶಗುಡಿಯಲ್ಲಿ ಅತಿಕ್ರಮಣದಾರರ ಸಭೆ:

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಜೋಯಿಡಾ

ಅರಣ್ಯವಾಸಿಗಳ ಸಭೆಯನ್ನು ಗಣೇಶಗುಡಿ, ಕಾಳಿನದಿ ಪಕ್ಕ, ಕಾಳೇಶ್ವರ ದೇವಸ್ಥಾನದಲ್ಲಿ ದಿನಾಂಕ ೧೬, ಡಿಸೆಂಬರ್ ರಂದು ಮುಂಜಾನೆ ೧೦:೦೦ ಗಂಟೆಗೆ ಕರೆಯಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.  ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುವ ದಿಶೆಯಲ್ಲಿ ಚಳಿಗಾಲದ ಬೆಳಗಾಂವ ಅಧಿವೇಶನದ ಡಿಸೆಂಬರ್ ೨೨ ರಂದು ಅರಣ್ಯವಾಸಿಗಳ ‘ಬೆಳಗಾಂವ ಚಲೋ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಚರ್ಚಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಸದ್ರಿ ಕಾರ್ಯಕ್ರಮಕ್ಕೆ ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CHETAN KENDULI

Be the first to comment

Leave a Reply

Your email address will not be published.


*