ಕೃಷಿ ಸಹಕಾರಿ ಸಂಘದ ಕಾರ್ಯದರ್ಶಿಗೆ ಯಲಗೋಡ ರೈತರಿಂದ ಧರ್ಮದೆಟ್ಟು

ದೇವರ ಹಿಪ್ಪರಗಿ : ತಾಲ್ಲೂಕಿನ ಯಲಗೊಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾರ್ಯದರ್ಶಿ ರಾಯಪ್ಪ ಗೌಡ ಅವರು ರೈತರ ಹೆಸರಿನಲ್ಲಿ ಸಾಲ ಪಡೆದು ರೈತರಿಗೆ ವಂಚನೆ ಮಾಡಿದ್ದರಿಂದ ಎಚ್ಚೆತ್ತುಕೊಂಡ ರೈತರು ಆತನನ್ನು ಹಿಡಿದು ಸಾರ್ವಜನಿಕವಾಗಿ ತಳಿಸುವುದರ ಜೊತೆಗೆ ಆತನನ್ನು ಎಳದಾಡಿ ಆತನ ಮೇಲಿನ ಅಂಗಿಯನ್ನು ಹರಿದು.ಯಲಗೋಡ ಕೃಷಿ ಪತ್ತಿನ ಸಹಕಾರಿ ಸಂಘದ ಹಲವಾರು ರೈತರ ಹೆಸರಿನಲ್ಲಿ ರಾಯಪ್ಪ ಗೌಡ ಸಾಲ ಪಡೆದಿದ್ದು ವಂಚಿತರುವದರಿಂದ ಕೂಡಲೇ ತನಿಖೆಯಾಗಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಬೆಳವಣಿಗೆಗಳು ಕಂಡುಬಂದಲ್ಲಿ ರೈತರು ಕೂಡಲೇ ಎಚ್ಚೆತ್ತುಕೊಂಡು ವಂಚಕರನ್ನು ಹಿಡಿದು ಶಿಕ್ಷೆಗೆ ಒಳಪಡಿಸುವ ದರೊಂದಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವದು ಸೂಕ್ತ ಅನೇಕ ರೈತರು ಅಭಿಪ್ರಾಯ ವ್ಯಕ್ತಪಡಿಸಿದರು

 

Be the first to comment

Leave a Reply

Your email address will not be published.


*