ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ಟಂಟಂ ಪಲ್ಟಿ ರಿಮ್ಸಗೆ ವಿದ್ಯಾರ್ಥಿಗಳು ದಾಖಲು

ವರದಿ: R ಖಾಜಿಗೌಡರ ಸಿರವಾರ


     ಜೀಲ್ಲಾ ಸುದ್ದಿಗಳು


ಸಿರವಾರ:(ಆ . 29 )- ನಾರಬಂಡ ಸಮೀಪದ ಹುಣಚೇಡ ಕ್ರಾಸ್ ನಲ್ಲಿ ಕುರುಕುಂದಾ ಗ್ರಾಮಕ್ಕೆ ಕ್ರೀಡಾ ಕೂಟಕ್ಕೆ ತೆರಳಿದ್ದ ಸಿರವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ಟಾಟಾಎಸಿ ( ಟಂಟಂ ) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ .

 

ಒಟ್ಟು 40 ವಿದ್ಯಾರ್ಥಿಗಳು ಕುರುಕುಂದಾ ಗ್ರಾಮದಲ್ಲಿ ನಿನ್ನೆ ನಡೆದ ಕ್ರೀಡಾಕೂಟಕ್ಕೆ ತೆರಳಿದ್ದ ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳಿಗೆ ಗಾಯಗಳು , ಮತ್ತು 5 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ . ಚಾಲಕನ ಆಚಾತುರ್ಯ ಹಾಗೂ ನಿಗದಿತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿರುವುದೇ ಈ ಘಟನೆಗೆ ಮುಖ್ಯ ಕಾರಣವಾಗಿದೆ ಎಂದು ತಿಳಿದು ಬಂದಿದೆ .

ಗಾಯಾಳುಗಳನ್ನು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲಾ ಮಕ್ಕಳನ್ನು ರಾಯಚೂರಿನ ರಿಮ್ಗೆ ದಾಖಲಿಸಲಾಗಿದೆ .


ಗಾಯಾಳು ವಿದ್ಯಾರ್ಥಿಗಳನ್ನು ಬೇಟಿಯಾದ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ


ಶಾಸಕ ಭೇಟಿ : ಘಟನೆ ವಿಷಯ ತಿಳಿದ ಶಾಸಕ ರಾಜಾ ವೆಂಕಟಪ್ಪನಾಯಕ್ , ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಗಾಯಾಳು ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ , ಮತ್ತು ಘಟನೆಯ ಕುರಿತು ಪಿ . ಎಸ್ . ಐ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ , ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು .


ರಾಯಚೂರು ಜಿಲ್ಲಾಧಿಕಾರಿ ಬಿ ಶರತ್ ರಿಮ್ಸಗೆ ಭೇಟಿ


ಡಿಸಿ ಭೇಟಿ : ರೀಮ್ಸ್ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಲು ಜಿಲ್ಲಾಧಿಕಾರಿ ಬಿ ಶರತ್ ರವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಬ್ಬರು ವಿದ್ಯಾರ್ಥಿಗಳ ಗಂಭೀರ ಗಾಯಗೊಂಡಿದು ಕಂಡು ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.

Be the first to comment

Leave a Reply

Your email address will not be published.


*