ನಾನು ಎಸ ಟಿ ಮಾಡೇ ಸಾಯುತ್ತೆನೆ ಎಂದು ಮತ್ತೆ ದೆಹಲಿಗೆ ಹೊರಡಲು ಸಿದ್ದಗೊಂಡ ಬಾಬುರಾವ್ ಚಿಂಚನಸೂರ



         ಕಲಬುರಗಿ ಜೀಲ್ಲಾ ಸುದ್ದಿ


ಕಲಬುರಗಿ: ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ಅನೇಕ ವರ್ಷಗಳ ಬೇಡಿಕೆ ಈಡೇರುವ ಸಮಯ ಬಂದಿದ್ದು, ಈಗ ಮಾಡು ಇಲ್ಲವೇ ಮಡಿ ಶಪಥ ನನ್ನದು ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ತಿಳಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ದೊರೆತಿರುವುದರಿಂದ ಬರುವ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರವಹಿಸಲಿದ್ದಾರೆ. ನಂತರ ಕೋಲಿ ಸಮಾಜ ಎಸ್ಟಿಗೆ ಸೇರಿಸುವ ಉದ್ದೇಶ ಈಡೇರಲಿದೆ. ಇದು ತನ್ನ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬ ಪ್ರಶ್ನೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋಲಿ ಸಮಾಜ ಎಸ್ಟಿಗೆ ಸೇರುವುದು ಶತಸಿದ್ಧ. ಇದಕ್ಕಾಗಿ ಪಣತೊಟ್ಟಿದ್ದು, ಸಮಾಜವನ್ನು ಎಸ್ಟಿಗೆ ಸೇರಿಸುತ್ತೇವೆ ಇಲ್ಲವಾದಲ್ಲಿ ಜೀವ ಬಿಡುತ್ತೇವೆ ಎಂದು ಚಿತ್ತಾಪೂರ ಗಂಗಾಪರಮೇಶ್ವರಿ ಕಾಲೇಜು ಅಧ್ಯಕ್ಷೆ ಅಮರೇಶ್ವರಿ ಚಿಂಚನಸೂರ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*