ಮುದ್ದೇಬಿಹಾಳದ ಲಿಂಗಾಯತ ಸಮಾಜದ ಹಿರಿಯ ಅಡಿವೆಪ್ಪ ಕಡಿ ನಿಧನ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಅಡಿವೆಪ್ಪ ಕಡಿ

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

ಪಟ್ಟಣದ ವಿದ್ಯಾನಗರದ ನಿವಾಸಿ, ಲಿಂಗಾಯತ ಸಮಾಜದ ಹಿರಿಯರಾದ ಅಡಿವೆಪ್ಪ ರುದ್ರಪ್ಪ ಕಡಿ (68) ಶುಕ್ರವಾರ ನಿಧನರಾದರು.


ಶ್ರೀ ಅಡಿವೆಪ್ಪ ಕಡಿ

ಮೃತರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಎಪಿಎಂಸಿಯ ಗಣ್ಯ ಅಡತ್ ವ್ಯಾಪಾರಸ್ಥರಾಗಿದ್ದರು. ನೇರ ನಿಷ್ಠುರ ನಡವಳಿಕೆಗಳಿಗೆ ಹೆಸರಾಗಿದ್ದ ಅವರು ತಮಗೆ ಕಂಡ ತಪ್ಪುಗಳನ್ನು ಯಾವುದೇ ಮುಲಾಜಿಲ್ಲದೇ ಟೀಕಿಸುವವರಾಗಿದ್ದರು. ಮೃತರು ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಜ್ಯದಲ್ಲಿಯೇ ಎರಡನೆಯ ಅತಿ ದೊಡ್ಡ ಅಶ್ವಾರೂಢ ಬಸವೇಶ್ವರ ಮೂರ್ತಿಯ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷರಾಗಿದ್ದರು. ಮೃತರಿಗೆ ಪುತ್ರಿ, ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಪಟ್ಟಣದಲ್ಲಿ ನಡೆಯಿತು. 

Be the first to comment

Leave a Reply

Your email address will not be published.


*