ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮನವಿ

ವರದಿ:- ಹನುಮಂತ್ರಾಯನಾಯಕ ದೇವದುರ್ಗ..

ದೇವದುರ್ಗ ಜೂ:8-ಎನ್ ಆರ್ ಬಿ ಸಿ ಕಾಲುವೆಗಳ ಹೂಳೆತ್ತುವುದು ಮತ್ತು ದುರಸ್ತಿ ಕಾಮಗಾರಿಗಳ ಆರಂಭಕ್ಕೆ ಒತ್ತಾಯಿಸಿ ಇಂದು ಜಾಲಹಳ್ಳಿ ನಾಡತಹಶಿಲ್ದಾರ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಯಿತು,

ನಾರಾಯಣಪುರ ಬಲದಂಡೆ ಕಾಲುವೆಗಳಲ್ಲಿ ಹೂಳು ತುಂಬಿ ಕಾಲುವೆಗಳು ಹೊಡೆದು ಹಾಳಾಗಿದ್ದು ಇದರಿಂದ ಕೊನೆ ಭಾಗದ ರೈತರ ಹೊಲಗಳಿಗೆ ನೀರು ತಲುಪದೆ ಕಂಗಾಲಾಗಿದ್ದಾರೆ, ಹೂಳೆತ್ತುವ ಕೆಲಸಕ್ಕೆ ಟೆಂಡರ್ ಕರೆದಿದ್ದು ಇಲ್ಲಿಯವರೆಗೆ ಯಾವುದೇ ಕೆಲಸ ಮಾಡಿರುವುದಿಲ್ಲ,ಜಾಲಹಳ್ಳಿಯ ಊರ ಕೆರೆಯ ಹಿಂದುಗಡೆ ಇರುವ ಕಿರು ನಾಲೆ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ತಕ್ಷಣ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮುಖಾಂತರ ಮನವಿ ಸಲ್ಲಿಸಲಾಯಿತು,

ಇದೇ ಸಂದರ್ಭದಲ್ಲಿ ಪ್ರಾಂತ ರೈತ ಸಂಘಟನೆ ತಾಲೂಕು ಅದ್ಯಕ್ಷ ನರಸಣ್ಣ ನಾಯಕ,ಕಾರ್ಯದರ್ಶಿ ಹನುಮಂತ ಮಂಡಲಗುಡ್ಡ,ಮೌನೇಶ, ಹನುಮಂತ ಮಡಿವಾಳ,ಗುರು ನಾಯಕ,ಬೋಜ,ಬಸವರಾಜ ವಂದಲಿ,ರಂಗನಾಥ ಲಿಂಗದಹಳ್ಳಿ,ಬಸವರಾಜ ಲಿಂಗದಹಳ್ಳಿ,ದುರುಗಪ್ಪ ಹೋರಟ್ಟಿ, ಶಬ್ಬೀರ್ ಅಹಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*