ಕರ್ನಾಟಕ ರೈತ ಸಂಘದ ಸಭೆಯು ಬ್ರಮರಾಂಭ ದೇವಿ ದೇವಸ್ಥಾನದಲ್ಲಿ ಯಶಸ್ವಿ ಜರುಗಿತು

ಮಸ್ಕಿ, ಪಟ್ಟಣದ ಬ್ರಮರಾಂಭ ದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರೈತ ಸಂಘದ ಸಭೆಯೂ ಸಮಿತಿಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಸಭೆಯು ಯಶಸ್ವಿಯಾಗಿ ಜರುಗಿತು.

 

ಸಮಿತಿಯ ಎಲ್ಲಾ ಸದಸ್ಯರ ಚರ್ಚೆ ಮೇರೆಗೆ ಜುಲೈ 07 ರಂದು ತಾಲೂಕಿನಲ್ಲಿ ಸಾಗುವಳಿ ಮಾಡುತ್ತಿರುವ ದಲಿತ ಭೂಹೀನ ಬಡ ರೈತರ ಹಾಗೂ ನಿವೇಶನ ರಹಿತರಿಗೆ ಪಟ್ಟಾ ನೀಡಲು ಆಗ್ರಹಿಸಿ ಮಸ್ಕಿ ತಹಶೀಲ್ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

 

ಈ ವೇಳೆಯಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷರು ಮಲ್ಲಯ್ಯ ಕಟ್ಟಿಮನಿ, ದುರುಗಣ್ಣ ಗಲಗ್ ಜಿಲ್ಲಾ ಸಮಿತಿ ಸದಸ್ಯರು,

ಮಸ್ಕಿ ತಾಲೂಕ ಅಧ್ಯಕ್ಷರಾದ ಸಂತೋಷ್ ಹಿರೇದಿನ್ನಿ, ಮಾರುತಿ ಜಿನ್ನಾಪುರ್,ತಿರುಪತಿ, ಅಮರೇಶ್ ಪಾಮನಕಲ್ಲೂರ, ಹುಲುಗಪ್ಪ ಚಿಲ್ಕರಾಗಿ, ವೆಂಕಟೇಶ್ ಚಿಲ್ಕರಾಗಿ, ಬಾಲಸ್ವಾಮಿ ಹೂವಿನಭಾವಿ, ಮಾಳಪ್ಪ ಹೂವಿನ ಬಾವಿ ಸೇರಿದಂತೆ ಇತರರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*