ಬ್ರಾಹ್ಮಣ ಸಂಘದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ*

ಕೆಜಿಎಫ್: ರಾಬರ್ಟ್‍ಸನ್‍ಪೇಟೆ ಸನಾತನ ಧರ್ಮಸಭಾ ಅವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ರಚನೆಯ ವಿಚಾರವಾಗು ತಾಲ್ಲೂಕು ಮಟ್ಟದ ವಿಚಾರ ವಿನಿಮಯವನ್ನು ಹಮ್ಮಿಕೊಳ್ಳಲಾಗಿತ್ತು .

 

ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ವೇದ ಬ್ರಹ್ಮ ಶ್ರೀ ಡಾ: ಅಂಜನ್ ಕುಮಾರ್ ಶರ್ಮ ರಾಜ್ಯದಲ್ಲಿ ಬ್ರಾಹ್ಮಣರು ತಮ್ಮ ಹಕ್ಕುಗಳಿಗಾಗಿ ಸಂಘಟನೆಯಾಗುವ ಅಗತ್ಯವಿದ್ದು ಎಲ್ಲರು ಸಂಘದಲ್ಲಿ ಸದಸ್ಯತ್ವವನ್ನು ಪಡೆಯುವ ಮೂಲಕ ಸಂಘಟನೆಯನ್ನು ಬಲಿಷ್ಟಗೊಳಿಸಲು ಸಹಕರಿಸಬೇಕು ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಹೇಳಿದರು.

ಸರ್ಕಾರದಿಂದ ಲಭಿಸುವ ಸೌಲತ್ತುಗಳನ್ನು ಕಟ್ಟಕಡೆಯ ಬ್ರಾಹ್ಮಣ ಸಮುದಾಯದ ವ್ಯಕ್ತಿಗೆ ತಲುಪಿಸಬೇಕಾದ ಅಧ್ಯ ಕರ್ತವ್ಯ ನಮ್ಮಲೆರ ಮೇಲು ಇದೆ ಎಂಬುದನ್ನು ಯಾರು ಮರೆಯಬಾರದು ಎಂದರು.

 

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸೌಜನ್ಯಚಂದ್ರಶೇಖರ್,ಶ್ರೀಮತಿಸ್ವಾತಿನರಸಿಂಹಮೂರ್ತಿ, ಸನಾತನ ಧರ್ಮಸಭಾದ ಅಧ್ಯಕ್ಷರಾದ ಡಾ:ಮಂಜುನಾಥ್,ಜನಾರ್ಧನ್ ಹೊಟೇಲ್ ಮಾಲಿಕ ರಾಮಕೃಷ್ಣ,ಚಂದ್ರಶೇಖರ್,ಸ್ವಯಂ ಸೇವಕ ಸಂಘದ ದತ್ತಾತ್ರೇಯ,ಸಿಅ.ಮುರಳಿಧರ ರಾವ್, ಗೋಪಾಲಕೃಷ್ಣ.,ಮುರಳಿಕೃಷ್ಣ,ವೆಂಕಟೇಶ್ ಪ್ರಸಾದ್,ಸೋಮಶೇಖರ್ ಹಾಗೂ ಇತರರು ಹಾಜರಿದ್ದರು.

 

Be the first to comment

Leave a Reply

Your email address will not be published.


*