ಮಾಜಿ ಪ್ರಧಾನಿ ಅಟಲ್ ಬಿಹಾರಿ ಜನ್ಮದಿನದ ಪ್ರಯುಕ್ತ ಸರ್ಕಾರಿ ಶಾಲೆ ಮಕ್ಕಳಿಗೆ ಕಂಬಳಿ ವಿತರಣೆ*

ಕೆಜಿಎಫ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಚರಣೆ ಪ್ರಯುಕ್ತ ಕ್ಷೇತ್ರದ ಎಲ್ಲೆಡೆ ಕಂಬಳಿ ವಿತರಿಸುವ ಕಾರ್ಯಕ್ರಮ ವನ್ನು ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸುರೇಶ್ ಅವರು ಪ್ರಾರಂಭಿಸಿದರು.

 

ಜಕ್ಕಸಾಕುಪ್ಪ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಸೇರಿರುವ ಸಂಗನಹಳ್ಳಿ ಗ್ರಾಮಕ್ಕೆ ಬೇಟಿ ಮಾಡಿ . ಸಂಗನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ದೇಶದ ಮಾಜಿ ಪ್ರಧಾನಿಮಂತ್ರಿಗಳಾದ ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಜ್ಞಾಪರ್ಥಕವಾಗಿ ಕಂಬಳಿಯನ್ನು ವಿತರಿಸಲಾಯಿತು .

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ನಾಗರಾಜು, ಶಿಕ್ಷಕರಾದ ಮುನಿಯಪ್ಪ ಜಕ್ಕಾಸಕುಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಸಂಗನಹಳ್ಳಿ ಗ್ರಾಮದ ಚಂದ್ರಶೇಕರ್, ವೆಂಕಟಾಚಲಪತಿ, ಶ್ರೀರಮಪ್ಪ,ಏತುರು ಬಾಬು ರೆಡ್ಡಿಹಳ್ಳಿ ಸದಸ್ಯರಾದ ಸ್ವಾಮೀ ವೇಲ್,ಡಿವಿ ಸುಬ್ರಮಣ್ಯ , ಶಿವಕುಮಾರ್, ಸಂಪಂಗಿ,ಗಣೇಶ್, ಭಾಸ್ಕರ್ ಹಾಗೂ ಗ್ರಾಮಸ್ಥರು ಇದ್ದರು.

 

Be the first to comment

Leave a Reply

Your email address will not be published.


*