ತಹಶೀಲ್ದಾರರ ಮೇಲಿನ ಹಲ್ಲೆ ಖಂಡಿಸಿ ನೌಕರರ ಸಂಘದಿಂದ ಮನವಿ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

 

ಮಸ್ಕಿ

CHETAN KENDULI

ಬೀದರ ಜಿಲ್ಲೆಯ ಡಾ: ಪ್ರದೀಪ ಹಿರೇಮಠ ಮಾನ್ಯ ತಹಶೀಲ್ದಾರರು ಹುಮ್ನಾಬಾದ ತಾಲ್ಲೂಕು ಇವರ ಮೇಲೆ ಮಾಡಿರುವ ಹಲ್ಲೆ ಖಂಡಿಸಿ, ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯ ತಹಶೀಲ್ದಾರರು ಮಸ್ಕಿ ಇವರ ಮುಖಾಂತರ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಬಹುಮಡಿ ಕಟ್ಟಡ ಬೆಂಗಳೂರು ರವರಿಗೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು ತಾಲ್ಲೂಕು ಘಟಕ:ಮಸ್ಕಿ, ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿಅಖ್ತರ್ ಅಲಿ ಶಿರಸ್ತೇದಾರರು ತಹಶೀಲ್ ಕಛೇರಿ ಮಸ್ಕಿ , ನಾಗನಗೌಡ ಪಾಟೀಲ್, ನಾಗಲಿಂಗ ಪತ್ತಾರ ಉಪ ತಹಶೀಲ್ದಾರ್, ಪ್ರಕಾಶ್ ಸೌದ್ರಿ ಗ್ರಾಮ ಲೆಕ್ಕಾಧಿಕಾರಿ, ಗದ್ದೆಪ್ಪ ಆ ಇಲಾಖೆ, ಬಾಬು ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಇನ್ನಿತರೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*