ಮಕ್ಕಳೊಂದಿಗೆ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ನರಪತ್ ರಾಜಪುರೋಹಿತ

ವರದಿ:ಶಾಂತಯ್ಯ ಯಾವಗಲ್ಲಮಠ

ಬಾಗಲಕೋಟೆ:ಇಳಕಲ್ಲ ತಾಲೂಕಿನ ಗುಡೂರ ಗ್ರಾಮದ ಯುವ ನಾಯಕ ಯುವ ಉದ್ಯಮಿ ಜನಸ್ನೇಹಿ ಬ್ಯಾಂಕಿನ ಅಧ್ಯಕ್ಷರು ಬುಕ್ ಬರ್ಡ್ ಅಧ್ಯಕ್ಷರು ಸಮಾಜ ಸೇವಕರು ಶ್ರೀ ನರಪತ ಕಪುರ ಸಿಂಗ ರಾಜಾಪುರೋಹಿತ ರವರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ಜೊತೆಗೆ ಸರಳವಾಗಿ ಆಚರಿಸಿಕೊಂಡು, ಮಕ್ಕಳಿಗೆ ನೀವು ನನಗೆ ಕೊಡುವ ಕಾಣಿಕೆ ಏನೆಂದರೆ ನಿಮ್ಮ ಭವ್ಯವಾದ ವ್ಯಕ್ತಿತ್ವ ನೀವು ಸ್ವಾವಲಂಬಿಗಳಾಗಿ ತಂದೆ ತಾಯಿಗೆ ಕಲಿಸಿದ ಗುರುಗಳಿಗೆ ಸಮಾಜಕ್ಕೆ ಚಿರಋಣಿಯಾಗಿ ನಿಮ್ಮ ಬದುಕು ಕಟ್ಟಿಕೊಂಡರೆ ಅದೇ ನೀವು ನನಗೆ ಕೊಡುವ ಕಾಣಿಕೆ ಎಂದು ತಮ್ಮ ಮನದಾಳದ ಆಶಯ ವ್ಯಕ್ತಪಡಿಸಿದರು.

SHARANAPPA HELAWAR

ಈ ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಯುವ ಉದ್ಯಮಿ,ಕ್ರಿಯಾಶೀಲ ಯುವನಾಯಕ ಮಲ್ಲು ಪಿ. ವಸ್ತ್ರದ ವಹಿಸಿದ್ದರು. ಗೆಳೆಯರು ಹಿತೈಸಿಗಳು ಅವರ ಸಂಸ್ಥೆಯ ಸದಸ್ಯರು ಸನ್ಮಾನಿಸಿ ಗೌರವಿಸಿದರು ಮಕ್ಕಳಿಗೆ ಪೆನ್ನು ಪುಸ್ತಕ ವಿತರಿಸಲಾಯಿತು ಈ ಸಂದರ್ಭದಲ್ಲಿ ಬಸವರಾಜ ಗಾರವಾಡ. ಪ್ರವೀಣ ಜಡ್ರಾಮಕುಂಟಿ, ಶಶಿ ಅಡಿಹಾಳ, ಪ್ರಶಾಂತ ವಸ್ತ್ರದ, ಕಳಕು ಗಂಜಿಹಾಳ, ರಮೇಶ ಭೋವಿ, ಗಾಜಿ, ಅಂಗಡಿ ಸಿಂಗ್ರಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*