ವಿಕಲಚೇತನರಿಗೆ ಯುಡಿಐಡಿ ಕಾರ್ಡ ಕಡ್ಡಾಯ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :ಕೇಂದ್ರ ಸರ್ಕಾರವು ವಿಕಲಚೇತನರನ್ನು ಗುರುತಿಸಲು ವಿಕಲಚೇತನರ ವಿಶೀಷ್ಠ ಗುರುತಿನ ಚೀಟಿ (ಯು.ಡಿ.ಐ.ಡಿ) ಸ್ಮಾರ್ಟ್ ಕಾರ್ಡ್ ಸೌಲಭ್ಯ ಪಡೆಯುವುದು ಖಡ್ಡಾಯವಾಗಿದೆ.

ಆನ್‍ಲೈನ್ www.swavalambancard.gov.in ಮೂಲಕ ಅರ್ಜಿ ಸಲ್ಲಿಸಿ, ಯುನಿಕ್ ಡಿಸೆಬಲಿಟಿ ಆಡೆಂಟಿಟಿ ಗುರುತಿನ ಚೀಟಿ ಪಡೆಯಬೇಕು. ಈ ಗುರುತಿನ ಚೀಟಿಯನ್ನು ಹೊಂದದೆ ಇದ್ದ ವಿಕಲಚೇತನರಿಗೆ ಈಗಾಗಲೇ ಕೇಂದ್ರ, ರಾಜ್ಯ ಸರ್ಕಾರದಿಂದ ಪಡೆಯಲಾಗುತ್ತಿರುವ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಜಿಲ್ಲೆಯ ಎಲ್ಲ ಸಮಸ್ತ ವಿಕಲಚೇತನರು ವಬ್‍ಸೈಟ್‍ನಲ್ಲಿ ನೋಂದಣಿಯಾಗಿ ವೈದ್ಯಕೀಯ ತಪಾಸಣೆಯನ್ನು ಮಾಡಿಕೊಳ್ಳುವುದರ ಮೂಲಕ ವಿಕಲಚೇತನರ ವಿಶೀಷ್ಠ ಗುರುತಿನ ಚೀಟಿಯನ್ನು ಪಡೆದುಕೊಳ್ಳುವಂತೆ ಜಿಲ್ಲಾ ವಿಕಚೇತರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*