ಗ್ರಾಮ ವಾಸ್ತವ್ಯಕ್ಕೆ ಆಯ್ಕೆಯಾದ ಗ್ರಾಮಗಳ ವಿವರ

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ:ಈ ತಿಂಗಳ 3ನೇ ಶನಿವಾರವಾದ ಫೆಬ್ರವರಿ 20 ರಂದು ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಗ್ರಾಮ ವಾಸ್ತವ್ಯ ಮಾಡಿದರೆ, ಬಾಗಲಕೋಟೆ ತಾಲೂಕಿನ ಬಿಲ್‍ಕೆರೂರ ಗ್ರಾಮದಲ್ಲಿ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ಬಾದಾಮಿ ತಾಲೂಕಿನ ಬೇಡರ ಬೂದಿಹಾಳ ಗ್ರಾಮದಲ್ಲಿ ತಹಶೀಲ್ದಾರ ಸುಹಾಸ ಇಂಗಳೆ, ಹುನಗುಂದ ತಾಲೂಕಿನ ಬೇವಿನಮಟ್ಟಿ ಹಾಗೂ ಗುಳೇದಗುಡ್ಡದ ಕಟಗೇರಿ ಗ್ರಾಮದಲ್ಲಿ ತಹಶೀಲ್ದಾರ ಗುರುರಾಜ ಕುಲಕರ್ಣಿ, ಇಲಕಲ್ಲ ತಾಲೂಕಿನ ಗಡಿಸುಂಕಾಪೂರ ಗ್ರಾಮದಲ್ಲಿ ನಿಂಗಪ್ಪ ಬಿರಾದಾರ, ಮುಧೋಳ ತಾಲೂಕಿನ ಮಾಲಾಪೂರ ಗ್ರಾಮದಲ್ಲಿ ತಹಶೀಲ್ದಾರ ಸಂಗಮೇಶ ಬಾಡಗಿ, ಬೀಳಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಭೀಮಪ್ಪ ಅಜ್ಜೂರ, ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಪ್ರಶಾಂತ ಚನಗೊಂಡ ವಾಸ್ತವ್ಯ ಮಾಡಲಿದ್ದಾರೆ.

Be the first to comment

Leave a Reply

Your email address will not be published.


*