ಶೀಘ್ರದಲ್ಲೇ ಹತ್ತು ಸಾವಿರ ಉದ್ಯೋಗ ಸೃಷ್ಟಿ ಮಾಡಿ ಮನೆಗೊಬ್ಬರಿಗೆ ಉದ್ಯೋಗ ನೀಡುತ್ತೇನೆ:ವೈ.ಸಂಪಂಗಿ

ಕೆಜಿಎಫ್: ಸಮೀಪದ ಗುಟ್ಟಹಳ್ಳಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗಳ ಮತ್ತು ಮಾರಸಂದ್ರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮನೆಮನೆಗೂ ತೆರಳಿ ಬಿಜೆಪಿ ಅಭ್ಯರ್ಥಿ ವೈ ಅಶ್ವಿನಿ ಸಂಪಂಗಿ ಅವರ ಪರ ಮತಯಾಚನೆ ಮಾಡಿ ಮಾತನಾಡಿದರು 2008 ಮತ್ತು 2013ರಲ್ಲಿ ನಾವು ಬಿಜೆಪಿ ಪಕ್ಷದ ಶಾಸಕರಾಗಿದ್ದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳೇ ಹೊರತು ಈಗಿನ ಶಾಸಕರು ಯಾವುದೇ ಅಭಿವೃದ್ಧಿಗಳನ್ನು ಕ್ಷೇತ್ರದಲ್ಲಿ ಮಾಡಿಲ್ಲವೆಂದು ಆರೋಪಿಸಿದರು

 

ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಮುಂದೆ ಇಟ್ಟುಕೊಂಡು ಜನರಿಗೆ ಬಡ್ಡಿ ರಹಿತ ಸಾಲ ನೀಡಿ ಜನರನ್ನು ಸಾಲಗಾರರನ್ನಾಗಿ ಮಾಡುತ್ತಿದ್ದಾರೆ ಈ ಬಾರಿ ಕ್ಷೇತ್ರದ ಜನತೆಯು ಶಾಸಕರಿಗೆ ತಕ್ಕ ಪಾಠ ಕಲಿಸುತ್ತಾರೆ ಮತ್ತು ಅದಲ್ಲದೆ ಬಿಜೆಪಿಯಲ್ಲಿರುವ ನಿಷ್ಠಾವಂತ ಮುಖಂಡರುಗಳು ಮತ್ತು ಕಾರ್ಯಕರ್ತರಿಗೆ ಸುಳ್ಳು ಭರವಸೆ ಆಸೆ ಆಕಾಂಕ್ಷೆಗಳನ್ನು ಹುಟ್ಟುತ್ತ ದಿಕ್ಕು ತಪ್ಪಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಶಾಸಕರಿಗೆ ಸೋಲಿನ ಭೀತಿ ಶುರುವಾಗಿದೆ ಎಂದರು.

 

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಲಪತಿ , ಮಾಜಿ ಅಧ್ಯಕ್ಷ ಮಮತಾ ರಮೇಶ್ ಗ್ರಾಮ ಪಂಚಾಯತಿ ಸದಸ್ಯ ಜಯರಾಮ ರೆಡ್ಡಿ, ನರಸಿಂಹಪ್ಪ ಮುಖಂಡರಾದ ಕಂಗಾನಲ್ಲೂರು ದೇವರಾಜ್, ಸುರೇಶ್ ,ಜಯರಾಮ್ ರೆಡ್ಡಿ, ಅಂಕತಟ್ಟಹಳ್ಳಿ ಮುನಿಯಪ್ಪ , ಕಳ್ಳಿಕುಪ್ಪ ಚಲಪತಿ ಸೀನಪ್ಪ ಕಾರ್ಯಕರ್ತರು ಇದ್ದರು.

Be the first to comment

Leave a Reply

Your email address will not be published.


*